ಓಬವ್ವ ಸಾಹಸ ಶೌರ್ಯದ ಪ್ರತೀಕ: ಶಾಸಕ‌ ರಘುಮೂರ್ತಿ

ಜಿಲ್ಲಾ ಸುದ್ದಿ

ಶೌರ್ಯಕ್ಕೆ ಓಬವ್ವ ಹೆಸರಾದರೆ ಭಕ್ತಿಗೆ ಭಕ್ತ ಕನಕದಾಸರು‌ ಹೆಸರಾಗಿದ್ದಾರೆ ಎಂದು ಶಾಸಕರಾದ ರಘು ಮೂರ್ತಿ ಹೇಳಿದರು.
ಅವರು ತಾಲೂಕು ಕಚೇರಿಯಲ್ಲಿ ನಡೆದ ಶ್ರೀ ಭಕ್ತ ಕನಕದಾಸರ ಮತ್ತು ಶ್ರೀ ವೀರ ವನತೆ ಒನಕೆ ಓಬವ್ವರ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪಾರ್ಚನೆ ಮಾಡಿ ಮಾತನಾಡಿದರು.

 

 

ಪ್ರತಿಯೊಬ್ಬ ಮಹಿಳೆಯರು ಕೂಡ ವೀರ ವನಿತೆ ಓಬವ್ವಳ‌ರೀತಿಯಲ್ಲಿ ಶೌರ್ಯ ಪರಾಕ್ರಮ ಹಾಗೂ ಧೈರ್ಯದಿಂದಿರಬೇಕು. ಎಂತಹ ಪರಿಸ್ಥಿತಿ‌ ಬಂದರೂ ಎದೆಗುಂದದೆ ಎದುರಿಸಬೇಕು ಎಂದರು.ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಎನ್ ರಘುಮೂರ್ತಿ, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಮಕ್ಕ ಆಂಜನಪ್ಪ ಹಾಗೂ ನಗರಸಭೆ ಸದಸ್ಯರುಗಳಾದ ಶ್ರೀಮತಿ ಸುಮಾ ಭರಮಯ್ಯ, ಶ್ರೀಮತಿ ಕವಿತಾ ಬೋರಯ್ಯ, ಶ್ರೀಮತಿ ಸುಜಾತ ಪ್ರಹ್ಲಾದ್, ಶ್ರೀಮತಿ ಚೈತುಂಬಿ ಮಾಲಿಕ್ ಸಾಬ್, ಶ್ರೀಮತಿ ಸಾವಿತ್ರಿ, ಶ್ರೀ ಮಲ್ಲಿಕಾರ್ಜುನ, ಪ್ರಕಾಶ್, ಚಳ್ಳಕೆರಪ್ಪ, ರಾಘವೇಂದ್ರ, ರಮೇಶ್ ಗೌಡ, ವಿರುಪಾಕ್ಷಿ, ವೀರಭದ್ರಯ್ಯ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್ ಮೂರ್ತಿ, ವಿಶ್ವ ಕರ್ಮ ರಾಜ್ಯಾಧ್ಯಕ್ಷರಾದ ಆರ್ ಪ್ರಸನ್ ಕುಮಾರ್ ಮತ್ತು ಸಮುದಾಯಗಳ ಮುಖಂಡರುಗಳಾದ ಮಲ್ಲೇಶಪ್ಪ, ಜಗನ್ನಾಥ್ , ಪರಸಪ್ಪ, ಮಲ್ಲಿಕಾರ್ಜುನ್, ನಿಜಲಿಂಗಪ್ಪ ,ಓಂಕಾರ್ ಮೂರ್ತಿ , ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಸಿ ಬಾಬು, ಮುಖಂಡರುಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *