ಹಗಲು ರಾತ್ರಿಯನ್ನದೆ ಜನರ ಸಮಸ್ಯೆ ಆಲಿಸಿದ ಶಾಸಕ ರಘುಮೂರ್ತಿ

ರಾಜ್ಯ

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಮುದ್ದಾಪುರ ಪಂಚಾಯತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಬೆಳಗಿನಿಂದ ರಾತ್ರಿಯವರೆಗೂ ಭೇಟಿ ನೀಡಿದರು. ಸಮಾಧಾನದಿಂದ ಕುಳಿತು ಗ್ರಾಮಸ್ಥರಿಂದ ಕುಂದುಕೊರತೆ ಗಳನ್ನು ಆಲಿಸಿದರು.

 

 

ನಂತರ ಕೆಲ ಕಡೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದರು.ಗ್ರಾಮಸ್ಥರಿಂದ ಆಲಿಸಿದ ಸ್ಥಳದಲ್ಲಿಯೇ ಬಗೆಹರಿಸುವಂತಹುಗಳನ್ನು ಬಗೆ ಹರಿಸಿದರು. ಉಳಿದವುಗಳನ್ನು ಕೂಡ , ಬಗೆಹರಿಸುವುದಾಗಿ ಭರವಸೆ ನೀಡಿದರು. ಮುದ್ದಾಪುರ ಪಂಚಾಯತಿ ವ್ಯಾಪ್ತಿಯ ಸಿದ್ಧವನದುರ್ಗ, ಚಿಕ್ಕಬ್ಬಿಗೇರಿ ಗೊಲ್ಲರಹಟ್ಟಿ, ಚಿಕ್ಕಬಿಗೆರೆ , ಹೀರೇಕಬ್ಬಿಗೇರಿ ಗೊಲ್ಲರಹಟ್ಟಿ, ಹೀರೇಕಬ್ಬಿಗೇರಿ ಲಂಬಾಣಿ ಹಟ್ಟಿ, ಹಿರೇಕಬ್ಬಿಗೆರೆ , ಮುದ್ದಾಪುರ ಮ್ಯಾಸರಹಟ್ಟಿ, ಸೂರನಹಳ್ಳಿ, ಸೂರನಹಳ್ಳಿ ಗೊಲ್ಲರಹಟ್ಟಿ, ಮುದ್ದಾಪುರ ಜೋಗೆ ಬೊರೆನಹಟ್ಟಿ , ಮುದ್ದಾಪುರ ಗ್ರಾಮಗಳಲ್ಲಿ ಕುಂದುಕೊರತೆ ಆಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರ ಮುಖಂಡರು, ಗ್ರಾಮದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.‌

Leave a Reply

Your email address will not be published. Required fields are marked *