ಚಳ್ಳಕೆರೆ ಒಂದೇ ಕುಟುಂಬದ ಮೂರು ಜನ ಮಹಿಳೆಯರು ನೀರಿನಲ್ಲಿ ವಿಷ ಬೆರೆಸಿಕೊಂಡು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುರುವಾರ ನಡೆದಿದೆ.. ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ದಲಿತ ಕಾಲೋನಿಯ ಮಂಗೇರ ತಿಪ್ಪಮ್ಮ(೭೦).ಮಾರಕ್ಕ(೪೫).ದ್ಯಾಮಕ್ಕ(೪೩) ಮೂರು ಜನರು ಬೆಳಗಿನ ಜಾವ ೪ ಗಂಟೆ ಸುಮಾರಿನಲ್ಲಿ ಶ್ಯಾಲು ಹೊದ್ದು ಹೊರಗೆ ಹೋಗಿ ಬಂದು ಮನೆಯೊಳಗೆ ಹೋದವರು ರಾತ್ರಿಯಾದರೂ ಬಾಗಿಲು ತೆಗೆಯದೆ. ಹೊರಗೂ ಬಾರದೆ ಇರುವುದರಿಂದ ಅಕ್ಕ ಪಕ್ಕದವರು ಕದ ತಟ್ಟಿದರೂ ಕಿಟಕಿ ಯಿಂದ ನೀರು ಹುಗ್ಗಿದರೂ ಎಚ್ಚರವಾಗದ ಕಾರಣ ಚಳ್ಳಕೆರೆ ಪೋಲಿಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಮಹಿತಿ ತಿಳಿದು ಚಳ್ಳಕೆರೆ ಪೋಲಿಸರು ಬಂದು ಬಾಗಿಲು ಹೊಡೆದು ಒಳ ಪ್ರವೇಶ ಮಾಡಿದಾಗ ನೀರಿನಲ್ಲಿ ವಿಷಬೆರೆಸಿ ಕುಡಿದಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಅಕ್ಟೋಬರ್ 26 ರಂದು ದ್ಯಾಮಣ್ಣ(೪೬) ಅನಾರೋಗ್ಯದಿಂದ ಮೃತಪಟ್ಟು ಒಂದು ತಿಂಗಳು ಮುಗಿಯುವ ಮುನ್ನವೇ ಮೂರು ಜನ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು ಮೃತರ ಮನೆ ಮುಂದೆ ಇಡೀ ಊರಿನ ಜನ ಸೇರಿ ಮರಗುತ್ತಿದ್ದರು.