ಸಾವರ್ಕರ್ ಬಗ್ಗೆ ಅವಮಾನಿಸುವ ಕೃತ್ಯ ನಡೆಯುತ್ತಿದೆ

ದೇಶ

ವೀರ ಸಾವರ್ಕರ್ ಅವರನ್ನು ಅವಮಾನಿಸಲಾಗಿದ್ದು, ಅವರ ಬಗ್ಗೆ ಮಸಿ‌ ಬಳೆಯುವ ಕೃತ್ಯವನ್ನು ಮಾಡಲಾಗಿದೆ ಎಂದು ವಿಹೆಚ್ ಪಿಯ ರಾಷ್ಟ್ರೀಯ ಸಹ ಕಾರ್ಯದರ್ಶಿ ಅಂಬರೀಷ್ ಆಕ್ರೋಶ ವ್ಯಕ್ತಪಡಿಸಿದರು.

 

 

ಅವರು ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿಯ ಶೋಭಾ ಯಾತ್ರೆ ಉದ್ಘಾಟಿಸಿ ಮಾತನಾಡಿದರು.
ಸಾವರ್ಕರ್ ಅವರ ಭಾವಚಿತ್ರವನ್ನು ಹರಿದು ಹಾಕುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ.ಆದರೆ ಅವರು ಎಂದು ಕೂಡ ನಮ್ಮ ಹೃದಯ ಸಮ್ರಾಜ್ಯದಲ್ಲಿ‌ ನೆಲೆಸಿದ್ದಾರೆ. ಭಾರತ್ ಮಾತಾಕಿ‌ಜೈ ಎಂಬ ಘೋಷಣೆಯೂ ಬರೀ‌ ಘೋಷಣೆಯಲ್ಲ‌ಅದು ಏಕತೆಯ ಸಂಕೇತ, ಹಿಮಾಚಲದಿಂದ ಕೆಳಗಿನವರೆಗೂ ಕೂಡ ಹಿಂದೂಗಳಿದ್ದೇವೆ. ಭಾರತ್ ಮಾತಾಕಿ‌ಜೈ ಎಂದು ಹೇಳಿದೇ ಭಾರತ ಮಾತೆ ಎದ್ದು ಬರುತ್ತಾಳೆ.‌ನಾವೆಲ್ಲ ಹಿಂದೂಗಳಾಗಿದ್ದು, ನಾವೆಲ್ಲರೂ ಒಂದೆ ಎಂದರು ಹೇಳಿದರು. ವಿವೇಕಾನಂದರು, ನಾವಹ ಹಿಂದೂಗಳು ಎಂದು ಹೇಳಿಕೊಳ್ಳಬೇಕು ಎಂದಿದ್ದಾರೆ. ನಾವುಗಳು ಹಿಂದೂ ಎಂದು‌ ಹೇಳಿಕೊಳ್ಳಲು ಹೆಮ್ಮೆಯಿದೆ. ನಾವು ಇಡೀ ದೇಶವನ್ನು ಒಂದು‌ ಕುಟುಂಬವಾಗಿ ನೋಡುತ್ತೇವೆ. ಇದು‌ ನಮ್ಮಿಂದ ಮಾತ್ರ ಸಾಧ್ಯ, ಅನಾದಿ‌ ಕಾಲದಿಂದಲೂ ಕೂಡ. ನಮ್ಮ ಪೂರ್ವಜರು ಹಿಂದೂ ಸಂಸ್ಕೃತಿಯನ್ನು ಪೂಜಿಸಿಕೊಂಡು ಬಂದಿದ್ದಾರೆ. ದೇಶ ಒಂದು‌ ಕುಟುಂಬವನ್ನಾಗಿ ಮಾಡುವುದು ನಮ್ಮ‌ ಗುರಿಯಾಗಿದೆ. ಸರ್ವರೂ ಆರೋಗ್ಯದಿಂದ ಸುಖವಾಗಿ ಇರುವುದು ಬಯಸುವವರು ನಾವು, ಇದಕ್ಕಾಗಿ ಇಂದು‌ ದೇಶವನ್ನು ರಕ್ಷಿಸುವ ಕೆಲಸವನ್ನು ಮಾಡಬೇಕಿದೆ. ಹಿಂದೂತ್ವವಾದಿಂದ ಮಾತ್ರ ದೇಶ ರಕ್ಷಿಸಲು ಸಾಧ್ಯ,ಇದರಿಂದ ದೇಶ ರಕ್ಷಿಸುವುದು ನಮ್ಮ ಸಂಕಲ್ಪವಾಗಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *