ಹಿರಿಯೂರಿನ ತಾಳವಟ್ಟಿಗ್ರಾಮದಲ್ಲಿ ಸತತ ಸುರಿದ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು,ಮನೆಗಳಿಗೆ ನೀರು ನುಗ್ಗಿದೆ ಮನೆಗಳನ್ನು ಸುಮಾರು ಎರಡರಿಂದ ಮೂರು ಅಡಿಗಳಷ್ಟು ನೀರು ನಿಂತಿದೆ. ಇದರಿಂದ ಮನೆಯಲ್ಲಿ ಯಾರೂ ಕೂಡ ಇರಲು ಸಾಧ್ಯವಾಗುತ್ತಿಲ್ಲ.ದವಸ ದಾನ್ಯಗಳು ಕೂಡ ಇಲ್ಲದಾಗಿದೆ. ನೀರು ಪಾಲಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದು, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರುಗಳಿಗೆ ಧೈರ್ಯ ಹೇಳಿ ಅಧಿಕಾರಿಗಳಿಗೆ ಸೂಕ್ತ ಪರಿಹಾರ ಹಾಗೂ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.ಈ ಸಮಯದಲ್ಲಿ ಇಓ ಹಾಗೂ ಇತರೇ ಅಧಿಕಾರಿಗಳು ಉಪಸ್ಥಿತರಿದ್ದರು.