ಹಿರಿಯೂರು ವೇದಾವತಿ ನದಿ ಪಾತ್ರದಲ್ಲಿ ನೀರು ಹೆಚ್ಚಾಗಿ ಮನೆಗಳಿಗೆ ನುಗ್ಗಿದ್ದು, ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಪ್ರವರ್ಗ 1 ರ ರಾಜ್ಯಾಧ್ಯಕ್ಷ ಶ್ರೀನಿವಾಸ್ ಊಟೋಪಚಾರ ನೀಡಿ ಪುನರ್ವಸತಿ ಕಲ್ಪಿಸಿದರು.
ಹಿರಿಯೂರು ವಾಣಿ ವಿಲಾಸ ಜಲಾಶಯವಯ ಭರ್ತಿಯಾಗಿ ಕೋಡಿ ಬಿದ್ದಿದ್ದು, ತಾಲೂಕು ಕಚೇರಿ ಹಿಂಭಾಗ, ರೆಡ್ಡಿ ಹೊಟೇಲ್ ಹತ್ತಿರ, ಮಟನ್ ಮಾರ್ಕೆಟ್, ಆಜಾದ್ ನಗರ, ಸಿದ್ದನಾಯಕ ಸರ್ಕಲ್,ಬಬ್ಬೂರು ರಸ್ತೆ, ಗೋಪಾಲ ಪುರ ಕಟುಕರ ಹಳ್ಳ, ಹನುಮಾನ್ ಶಾಮಿಲ್ ವರೆಗೆ ಹಾನಿಯಾಗಿರುವ ಮನೆಗಳನ್ನು ಶಾಸಕರು ಹಾಗೂ ಅಧಿಕಾರಿಗಳು ವೀಕ್ಷಣೆ ಮಾಡಿದರು. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಾಡಿದ್ದು ಅಲ್ಲಿಗೂ ಭೇಟಿ ನೀಡಿ ಕುಟುಂಬಗಳಿಗೆ ಧೈರ್ಯ ಹೇಳಿದರು. ಈ ಸಮಯದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನೀಕೇರಿ, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಇಓ ಈಶ್ವರಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಮಂಜುನಾಥ್,ಸದಸ್ಯರಾದ ಜಗದೀಶ್, ನಾಗರಾಜ್, ಕೃಷ್ಣಮೂರ್ತಿ, ಮುಂತಾದವರು ಉಪಸ್ಥಿತರಿದ್ದರು.