ಜಿಲ್ಲಾ ಪ್ರಶಸ್ತಿ‌ ಪಡೆದ ಶಿಕ್ಷಕರಿಗೆ ಇನ್ನಷ್ಟು‌ ಪ್ರೇರಣೆಯಾಗಲಿ

ಜಿಲ್ಲಾ ಸುದ್ದಿ

ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ, ದೇಶ ಕಟ್ಟುವ ಕಾರ್ಯದಲ್ಲಿ ಭದ್ರಬುನಾದಿ ಹಾಕಿ ದೇಶದ ಪ್ರಜೆಗಳನ್ನು ಸತ್ ಪಥದಲ್ಲಿ ನಡೆಸುವ ಶಿಕ್ಷಕರಿಗೆ 2022-23 ನೇ ಸಾಲಿನಲ್ಲಿ ಭಾರತ ಸರ್ಕಾರದ ವತಿಯಿಂದ ನೀಡುವ “ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ” ಕರ್ನಾಟಕ ಸರ್ಕಾರದ ವತಿಯಿಂದ ನೀಡುವ ರಾಜ್ಯ,ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ‌ ಪ್ರಶಸ್ತಿಗೆ ಆಯ್ಕೆಯಾದ, ಸರ್ಕಾರಿ ನೌಕರರಲ್ಲೇ ಅತಿ ದೊಡ್ಡ ಸಮುದಾಯವಾದ ಶಿಕ್ಷಕ ಬಂಧುಗಳು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ಆಯ್ಕೆಯಾಗಿರುವ ಎಲ್ಲಾ ಶಿಕ್ಷಕ ಬಾಂಧವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗದ ಸಮಸ್ತ ಪದಾಧಿಕಾರಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಜಲ್ಲಾಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ತಮ್ಮ ಅನುಪಮ ಸೇವೆಗಾಗಿ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರ,ರಾಜ್ಯ,ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಸ್ವೀಕರಿಸಲಿರುವ ಎಲ್ಲರಿಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು,ಮುಂದಿನ ದಿನಗಳಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ತಮ್ಮಿಂದ ಗುಣಮಟ್ಟದ ಉತ್ತಮ ಸೇವೆ ಸಲ್ಲಿಸಿರೆಂದು ಆಶಿಸುತ್ತೇನೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಪ್ರಾಮಾಣಿಕವಾಗಿ ನೀವುಗಳು ಶ್ರಮಿಸುತ್ತಾ,ಆದರ್ಶ ಶಿಕ್ಷಕರಾಗಿ ಸಮಾಜದಲ್ಲಿ “ಶಿಕ್ಷಕ” ವೃತ್ತಿಯ ಪಾವಿತ್ರ್ಯತೆಯನ್ನು ಕಾಪಿಟ್ಟುಕೊಂಡು,ಪ್ರಶಸ್ತಿಯ ಮೌಲ್ಯ,
ಘನತೆ, ಗೌರವವನ್ನು ಎತ್ತಿ ಹಿಡಿದು,ಮಾದರಿ ಶಿಕ್ಷಕರಾಗಿ, ಇನ್ನಷ್ಟು ಕೀರ್ತಿ, ಯಶಸ್ಸು ತಮಗೆ ಲಭಿಸಲಿ ಎಂದು ಶುಭ ಹಾರೈಸಿದರು.
ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳು: ಉಮೇಶ.ಟಿ.ಪಿ.ಅಮೃತಾಪುರ ಹೊಳಲ್ಕೆರೆ.ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಶ್ರೀಮತಿ ಕವಿತ.ಇ ಬೋರಪ್ಪನಗುಡಿ. ಚಳ್ಳಕೆರೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಶ್ರೀಮತಿ ಬಿ ಎಸ್.ಯೋಗೇಶ್ವರಿ.ಗಾಂಧಿನಗರ ಚಳ್ಳಕೆರೆ ಈರಣ್ಣ.ಬಿ.ಹಿರೇಮದುರೆ ಉಪ್ಪಾರಹಟ್ಟಿ ಚಳ್ಳಕೆರೆಎಂಎನ್.ರಾಮು.ಭೀಮಸಮುದ್ರ.ಚಿತ್ರದುರ್ಗ, ಝಮ್ರದ್ ಫರ್ವಿನ್.ಅಗಸನಕಲ್ಲು ಚಿತ್ರದುರ್ಗವಸಂತಕುಮಾರ.ಸಿದ್ದಾಪುರ, ಚಿತ್ರದುರ್ಗ ಎನ್.ಬಸವರಾಜಪ್ಪ ಗುಡ್ಡದಸಾಂತೇನಹಳ್ಳಿ.ಹೊಳಲ್ಕೆರೆ ಎನ್.ತಿಪ್ಪೇಸ್ವಾಮಿ ಚನ್ನಪಟ್ಟಣ,ಹೊಳಲ್ಕೆರೆ ಎಸ್.ಜಾನಕಮ್ಮಬನ್ಸಿಹಳ್ಳಿ.ಹೊಸದುರ್ಗಜಿ.ಸರಸ್ವತಿ.ಕಾಟೇಹಳ್ಳಿಹೊಸದುರ್ಗ,ನಾಗರಾಜ್.ಜಿ.ಜಿ.ಕೋನಸಾಗರ,ಮೊಳಕಾಲ್ಮುರುP.N.ಕುಮಾರ್.ಚೌಡಿಪುರ,ಮೊಳಕಾಲ್ಮುರು,T.H.ಓಬಳೇಶ್,ಗೋಗುದ್ದು,ಹಿರಿಯೂರು, ವಿಶೇಷ ಜಿ.ಹಾಲೇಶ್, ಶಾಂತಿನಗರ,ಚಳ್ಳಕೆರ ಪ್ರೇಮ .ಕೆಲ್ಲೋಡು ಹೊಸದುರ್ಗಭಾಗ್ಯಮ್ಮ ಹೇಮದಳ ಹಿರಿಯೂರು ಶಿವಕುಮಾರ್ ಬೆಳವಿನಮರದಹಟ್ಟಿ.ಮೊಳಕಾಲ್ಮುರು,ಶಾಂತಮ್ಮ ಅನ್ನೇಹಾಳ್ಮತ್ತು ಜಂಪಯ್ಯನಹಟ್ಡಿ ಚಿತ್ರದುರ್ಗ ಇವರ ಜೊತೆಗೆ ಶಿಕ್ಷಕರೆಲ್ಲರಿಗೂ ವೃತ್ತಿಯಲ್ಲಿ ತೊಡಗಿರುವ ಎಲ್ಲಾ ಗುರುಗಳು ಮತ್ತು ಗುರು ಮಾತೆಯರು ತಮ್ಮ ವೃತ್ತಿ ಜೀವನದಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆಯಾಗಲಿ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷ ಮಂಜುನಾಥ ಕೆ ಹಾರೈಸಿದ್ದಾರೆ

 

 

Leave a Reply

Your email address will not be published. Required fields are marked *