ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಎದೆ ನೋವಿನಿಂದ ಬಳಲುತ್ತಿರುವ ಮುರುಘಾ ಶರಣರನ್ನು ಇದೀಗ ತಾನೆ ಜಿಲ್ಲಾಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಿಲಾಗಿದೆ. ಶರಣರಿಗೆ ಎದೆ ನೋವು, ಹೊಟ್ಟೆ ನೋವು ಹಾಗೂ ಇತರೇ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಅವರನ್ನು ಇದೀಗ ಐಸಿಯುಗೆ ಶಿಫ್ಟ್ ಮಾಡಲಾಯಿತು. ಇಲ್ಲಿನ ವೈದ್ಯೆ ಲೀಲಾ ರಾಘವನ್ ಆರೋಗ್ಯ ತಪಾಸಣೆ ಮಾಡಿದ್ದು ಹೃದಯ ರೋಗವಿರುವುದು ತಿಳಿದು ಬಂದಿದೆ. ಇದರ ವರದಿಗಾಗಿ ಕಾಯುತ್ತಿದ್ದು, ದಾವಣಗೆರೆಯಿಂದ ಹೃದಯ ರೋಗ ತಜ್ಞರು ಆಗಮಿಸಿ ಆರೋಗ್ಯ ತಪಾಸಣೆ ಮಾಡಿದ ನಂತರ ಶರಣರನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ರವಾನಿಸಲಾಗುತ್ತದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ಹೇಳಿದ್ದಾರೆ.