ಕಾಂಗ್ರೆಸ್ ನಿಂದ ಬಿಜೆಪಿ ಕಚೇರಿ ಮುತ್ತಿಗೆ ಯತ್ನ

ಜಿಲ್ಲಾ ಸುದ್ದಿ

ಮಡಿಕೇರಿಯಲ್ಲಿ‌ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ‌ ನೀಡಿ ಸಾಂತ್ವಾನ ಹೇಳಲು ಹೊರಟಿದ್ದ ಮಾಜಿ‌ ಸಿಎಂ ಸಿದ್ದರಾಮಯ್ಯ ಅವರಿಗೆ ಮೊಟ್ಟೆ ಎಸೆದ ಆರ್ ಎಸ್ ಎಸ್ ಹಾಗೂ ಬಿಜೆಪಿ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ಕಾಂಗ್ರೆಸ್ ಕಚೇರಿಯಿಂದ ಬಿಜೆಪಿ ಕಚೇರಿ ವರೆಗೆ ಜಾಥಾ ನಡೆಸಲಾಯಿತು.

 

 


ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮೊಟ್ಟೆಯನ್ನು ಹಿಡಿದು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದರು. ಮೊಟ್ಟೆಯಿಂದ ಹೊಡೆಯಲು ಹೊರಟಿದ್ದರು, ಇನ್ನೇನು ಮೊಟ್ಟೆ ಎಸೆಯಬೇಕು ಆ ಸಮಯದಲ್ಲಿ ಅಲ್ಲಿಗೆ ಬಂದ ಪೋಲಿಸರು ಕಾಂಗ್ರೆಸ್ ಕಾರ್ಯಕರ್ತ ರನ್ನು ಬಂಧಿಸಿದರು. ಇದರಿಂದ ಬಿಜೆಪಿ ಸರ್ಕಾರ ಹಾಗು ಸಂಘ ಪರಿವಾರದ ವಿರುದ್ದ ಘೋಷಣೆ ಹಾಕಿದರು.
ಈ ಪ್ರತಿಭಟನಾ ಮೆರವಣಿಗೆ ಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಟಿ. ಜಗದೀಶ್, ಹಿಂದುಳಿದ ವರ್ಗಗಗಳ ಕಾಂಗ್ರೆಸ್ ಅಧ್ಯಕ್ಷ ಎನ್ ಡಿ‌ ಕುಮಾರ್ ಮರುಳಾರಾಧ್ಯಾ, ಅಂಜಿನಪ್ಪ, ಪಾಲವ್ವನಹಳ್ಳಿ ಕರಿಯಪ್ಪ, ಕುತುಬ್, ಶ್ರೀರಾಮ್, ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭ್ರಷ್ಟ ಬಿಜೆಪಿಯ ಸರ್ಕಾರ ಮತ್ತು ಸರ್ಕಾರದ ನಡೆ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು

 

Leave a Reply

Your email address will not be published. Required fields are marked *