ಲಾರಿ ಬಸ್ ನಡುವೆ ಡಿಕ್ಕಿ 15 ಕ್ಕೂ ಹೆಚ್ಚು ಮಂದಿಗೆ ಗಾಯ

ಜಿಲ್ಲಾ ಸುದ್ದಿ

ರಾಜ್ಯ ರಸ್ತೆ ಸಾರಿಗರ ಬಸ್ ಮತ್ತು ಲಾರಿ ನಡುವೆ ಮುಖಾ ಮುಖಿ‌ ಡಿಕ್ಕಿ‌ ಸಂಭವಿಸಿ 15 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ.

 

 


ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಜವನಗೊಂಡಹಳ್ಳಿಯ ಬಳಿ ಹಿರಿಯೂರಿನಿಂದ ಬೆಂಗಳೂರಿನ ಕಡೆಗೆ ರಾಜ್ಯ ರಸ್ತೆ ಸಾರಿಗೆ ಬಸ್ ಹೋಗುತ್ತಿದ್ದು ಲಾರಿ ಚಾಲಕ. ಏಕಾಏಕಿ ಯೂ ಟರ್ನ್ ತೆಗೆದುಕೊಂಡಿದ್ದರಿಂದ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಅಭಿಜಿತ್, ರಾಘವೇಂದ್ರ ರೆಡ್ಡಿ ನೇತ್ರಾಬಾಯಿ, ಲಕ್ಷ್ಮಣ್ ಸೇರಿ 15 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಗಾಯಾಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *