75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ತಾಲ್ಲೂಕಿನ ಅದ್ದೂರಿಯಾಗ ಆಚರಿಸಲು ಎಲ್ಲಾರ ಸಹಕಾರಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ನಗರದ ವಾರಿಯರ್ಸ್ ಶಾಲೆಯಲ್ಲಿ ಶಿಕ್ಷಕರನ್ನು ಕುರಿತು ಮಾತನಾಡಿದ ಅವರು 75 ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೂ ಮುನ್ನ 13 ತಾರೀಖನಂದ ನಗರದಲ್ಲಿ ಒಂದು ಕಿಲೋಮೀಟರ್ ರಾಷ್ಟ್ರ ಧ್ವಜ ವನ್ನು ನಗರದ ಪ್ರಥಮ ದರ್ಜೆ ಕಾಲೇಜಿನಿಂದ ಬೆಳಗ್ಗೆ 10.30 ನೆಹರು ವೃತ್ತದವರೆಗೂ ಮೆರವಣಿಗೆ ನಡೆಯುತ್ತದೆ ಇದರಲ್ಲಿ ನಗರದ ಹಲವು ಶಾಲೆಗಳಿಂದ ದೇಶ ಭಕ್ತರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಶ ತೊಟ್ಟು ಮಕ್ಕಳು ಈ ಮೇರವಣಿಗೆ ಯಲ್ಲಿ ತಮ್ಮ ಪ್ರತಿಭೆ ತೋರಲಿದ್ದಾರೆ. ಅಂದು ಕಾರ್ಯಕ್ರಮದ ಯಶಸ್ವಿಯಾಗಿ ಎಲ್ಲಾಶಿಕ್ಷಕರ ಸ್ವಯಂ ಪೇರಿತರಾಗಿ ಮಕ್ಕಳು ಕರೆತರಬೇಕು, ಎಂದರು ಈ ಸಮಯದಲ್ಲಿ ವಾರಿಯರ್ಸ್ ಶಾಲೆಯ ಮುಖ್ಯಸ್ಥರಾದ ಸುಭಾಷ್ ದಯಾನಂದ,ಹಾಗೂ ವಿಎಗಳಾದ ಪ್ರಕಾಶ,ಉಮೇಶ,ಶಿಕ್ಷಕಿಯರು ಶಿಕ್ಷಕರು ಇದ್ದರು.