ಚಳ್ಳಕೆರೆಯ ವೇದಾವತಿ ನದಿಯಿಂದ ರಾಣಿಕೆರೆಗೆ ಹರಿಯುವ ಕಾಲುವೆ ನೀರಿನ ಪೈಪ್ ಹೊಡೆದು ಲಕ್ಷಾಂತರ ಕ್ಯೂಸೆಕ್ಸ್ ನೀರು ವ್ಯರ್ಥವಾಗುತ್ತಿದೆ.
ಚಳ್ಳಕೆರೆ ತಾಲೂಕಿನ ರೈತರ ಜಮೀನುಗಳಿಗೆ ನೀರುಣಿಸುವ ರಾಣಿ ಕೆರೆಗೆ ಹರಿಯುವ ನೀರಿನ ಪೈಪ್ ಹೊಡೆದು ಹೋಗಿದೆ.
ತಾಲೂಕಿನ ನಾರಾಯಣಪುರ ಹಾಗೂ ಮೆಟ್ಟಿಲು ಗೆರೆ ಕಾಲುವೆ ಮೂಲಕ ಹರಿದು ಬರುವ ನೀರು ಬೆಳೆಗೆರೆ ಗ್ರಾಮದ ಮೂಲಕ ರಾಣಿಕೆರೆ ಸೇರುತ್ತದೆ. ಆದರೆ ಇದುವರೆಗೂ ನೀರು ವರ್ಥ್ಯವಾಗುತ್ತಿದ್ದರೂ ಕೂಡ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯುತ್ತಿಲ್ಲ, ರಾಣಿಕೆರೆ ಒಂದು ಬಾರಿ ತುಂಬಿದರೆ ಸಾವಿರಾರು ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಾಗಿ ರೈತರ ಜಮೀನುಗಳಿಗೆ ನೀರಾಗುತ್ತದೆ. ಆದರೆ ಇದೀಗ ನೀರಿನ ಪೈಪ್ ಹೊಡೆದು ವ ನೀರು ವ್ಯರ್ಥ ವಾಗುತ್ತಿದ್ದರೂ ಯಾರೂ ಬಂದುನೋಡದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಾಲುವೆ ಹೊಡೆದು ಹೋಗಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ ಆದರೆ ಇನ್ನಷ್ಟು ನೀರು ವ್ಯರ್ಥವಾಗುವ ಮೊದಲೇ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಕಾಲುವೆಯ ಪೈಪ್ ದುರಸ್ಥಿ ಮಾಡಬೇಕಿದೆ.