BIG BREAKING NEWS
ಗುರುಮಿಠ್ ಕಲ್ ನ ಅರಕೇರಾ (ಕೆ) ಬಳೆ ಭೀಕರ ಅಪಘಾತ ನಡೆದು ಒಂದೆ ಕುಟುಂಬದ ಆರು ಜನರು ಮೃತ ಪಟ್ಟ ಘಟನೆ ನಡೆದಿದೆ
ಯಾದಗಿರಿಯ ಗುರುಮಿಠ್ ಕಲ್ ತಾಲೂಕಿನ ಅರಕೇರಾ ಬಳಿ ತಡ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇದರಲ್ಲಿ ಒಂದೆ ಕುಟುಂಬದ ಆರು ಜನರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಕಾರು ಹಾಗೂ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲಿ ಮೂವರು ಹಾಗೂ ಆಸ್ಪತ್ರೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಒಂದು ವರ್ಷದ ಹೆಣ್ಣು ಮಗು ಸೇರಿದ್ದು, ಇವರೆಲ್ಲರೂ ಕೂಡ ರಾಯಚೂರು ತಾಲೂಕಿನ ಲಿಂಗಸಗೂರು ಹಟ್ಟಿಯವರು ಎಂದು ತಿಳಿದು ಬಂದಿದೆ. ತೆಲಾಂಗಣದ ಕೊಡಂಗಲ್ ದರ್ಗಾಕ್ಕೆ ತೆರಳಿದ್ದರು. ದರ್ಶನ ಪಡೆದು ವಾಪಾಸ್ಸು ಬರುವಾಗ ಈ ದುರಂತ ಸಂಭವಿಸಿದ್ದು, ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ. ಗುರುಮಿಠ್ ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ