BREKING NEWS
ಚಳ್ಳಕೆರೆ ಚೌಳೂರಿನಲ್ಲಿ ನದಿಯ ಪ್ರವಾಹದ ಸೆಳೆತಕ್ಕೆ ಬಿದ್ದು ವ್ಯಕ್ತಿ ಸಾವು
ಸತತ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ವೇದಾವತಿ ನದಿಯ ಪ್ರವಾಹದ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೂ ಸಾವಿಗೀಡಾಗಿರುವ ಘಟನೆ ಚೌಳೂರಿನಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚೌಳೂರು ಹೋಬಳಿಯ ಕುಮಾರ 35 ಎಂಬ ವ್ಯಕ್ತಿ ಪ್ರವಾಹದ ಸೆಳೆತಕ್ಕೆ ನದಿಗೆ ಬಿದ್ದು, ಸಾವಿಗೀಡಾಗಿದ್ದಾನೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರಘು ಮೂರ್ತಿ,ಪರುಶುರಾಮ ದ ಪಿಎಸ್ಐ ಸ್ವಾತಿ ಅವರುಗಳು ಮೃತ ದೇಹವನ್ನು ಹುಡುಕಿಸಿ ತೆಗೆಸಿದ್ದಾರೆ.ಇನ್ನು ಇದೇ ಸಮಯದಲ್ಲಿ ಮಾತನಾಡಿದ ತಹಶೀಲ್ದಾರ್ ರಘುಮೂರ್ತಿ ನದಿ ತುಂಬಿ ಹರಿಯುವಾಗ ನದಿ ಪಾತ್ರದಲ್ಲಿ ರುವವರು ಯಾರೂ ಕೂಡ ಇರಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.ನಂತರ ಮೃತ ಕುಮಾರ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಸುದ್ದಿ ಜಾಹೀರಾತಿಗೆ ಸಂಪರ್ಕಿಸಿ: 8660924503