ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಿರುದ್ಧ ಭುಗಿಲೆದ್ದ ಆಕ್ರೋಶ

ರಾಜಕೀಯ

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್ ವಿರುದ್ದ ವಿವಿಧ ಸೆಲ್ ಗಳ ಅಧ್ಯಕ್ಷರು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿತ್ತು.
ಮುರುಘಾ ಮಠದ ರಾಹುಲ್ ಗಾಂಧಿ‌ ಕಾರ್ಯಕ್ರಮಕ್ಕೆ ನಿ‌ನ್ನೆ ಪಕ್ಷದ ವಿವಿಧ ಸೆಲ್ ಗಳ ಅಧ್ಯಕ್ಷರು ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಪಾಸ್ ನೀಡುವ ಉದ್ದೇಶದಿಂದ ಪಟ್ಟಿಯ‌ನ್ನು ಪಡೆಯಲಾಗಿತ್ತು. ಆದರೆ ಇಂದು ಬೆಳಗ್ಗೆ ಬಂದರೆ ಪಾಸ್ ಕೊಟ್ಟಿಲ್ಲ. ಬದಲಿಗೆ ಪಕ್ಷಕ್ಕೆ ದುಡಿಯದೆ ಇರುವ ಅವರ ಹಿಂಬಾಲಕರಿಗೆ ಮಾತ್ರ ಪಾಸ್ ನೀಡಿದ್ದಾರೆ. ಇದು ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಆಕ್ರೋಶ ಭುಗಿಲೆಳಲು ಕಾರಣವಾಗಿತ್ತು.

 

 

ರಾಹುಲ್ ಗಾಂಧಿ‌ ಅತ್ತ ಹೋಗುತ್ತಿದ್ದಂತೆಯೇ ಇತ್ತ ವಿವಿಧ ಸೆಲ್ ಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಅಧ್ಯಕ್ಷ ರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶವನ್ನು ಹೊರ ಹಾಕಿದರು.

Leave a Reply

Your email address will not be published. Required fields are marked *