ಆಗಸ್ಟ್ 3 ರಂದು ಚಿತ್ರದುರ್ಗ ಕ್ಕೆ ರಾಹುಲ್ ಗಾಂಧಿ ಭೇಟಿ

ರಾಜಕೀಯ

ಮುಂದಿನ ತಿಂಗಳು ಭಾರತ್ ಜೋಡೋ ಮೂಲಕ ರಾಹುಲ್ ಗಾಂಧಿ ಪಾದಯಾತ್ರೆ ಆರಂಭಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಅವರು ಮಾಜಿ‌ ಸಿಎಂ ದಿವಂಗತ ಎಸ್ ನಿಜಲಿಂಗಪ್ಪ‌‌‌ಸ್ಮಾರಕ ಭವನದಲ್ಲಿ ಪೂರ್ವಭಾವಿ  ಸಭೆಯಲ್ಲಿ‌ ಮಾತನಾಡಿದರು.
ಆಗಸ್ಟ್ 3 ರಂದು ರಾಹುಲ್ ಗಾಂಧಿ‌ ಮುರುಘಾ ಮಠಕ್ಕೆ‌ ಬಂದು‌‌ ಅವರು ಶರಣರನ್ನು ಭೇಟಿ‌ ಮಾಡಲಿದ್ದಾರೆ. ಶ್ರೀಗಳ‌ ಭೇಟಿ‌ ನಂತರ‌ ದಾವಣಗೆರೆಗೆ ತೆರಳುತ್ತೇವೆ.

 

 

ನಮ್ಮ ಹೋರಾಟ ಬಿಜೆಪಿ ಮತ್ತು‌ಜೆಡಿಎಸ್ ಮೇಲೆ ಇರುತ್ತದೆ. ಅವನು‌ ಹಿಂಗಂದ ಇವನು‌ ಹಿಂಗಂದ ಎಂದು‌ ಕೂಡಬಾರದು,ನಾವು ನಾವೇ ಫೈಟ್ ಮಾಡುತ್ತಾ ಸಮಯ ವ್ಯರ್ಥ ಮಾಡಬಾರದು, ನಾನು‌ಈಶ್ವರ್ ಖಂಡ್ರೆ ಫೈಟ್ ಮಾಡುತ್ತಾ ಕೂಡುವುದಲ್ಲ, ನೀವೆಲ್ಲಾ ವಿಧಾನ ಸೌಧದ 3 ನೆರ ಮಹಡಿಯಲ್ಲಿ ಓಡಾಡಬೇಕು, ಈ ರಾಜ್ಯದಲ್ಲಿ‌ಕಾಂಗ್ರೆಸ್ ನ್ನು‌ಅಧಿಕಾರಕ್ಕೆ ತರುವುದೇ ನಮ್ಮ‌ ಹೋರಾಟವಾಗಿದೆ. ಮೂರ್ನಾಲ್ಕು ವರ್ಷಗಳಿಂದ ತೊಂದರೆ ಪಟ್ಟಿರುವುದು ನೀವು‌ ತಿಳಿದಿದ್ದೀರಾ, ಮನೆ ಬಾಗಿಲಿಗೆ ಅವಕಾಶ ಅಧಿಕಾರ, ಬೆಳಕು ಲಕ್ಷ್ಮಿ‌ಬರ್ತಿದ್ದಾಳೆ, ಕೈ ಮುಗಿದು ಬಾ ತಾಯಿ ಎಂದು‌ ಕರೆದುಕೊಂಡು ಬರಬೇಕು, ಅದು‌ಬಿಟ್ಟು ಕಳೆದು‌ಕೊಂಡು ಆ ಮೇಲೆ ಹೀಗೆ ಮಾಡಬಾರದಿತ್ತು ಎಂದು‌ ಮರುಗಬಾರದು, ಎಂದು‌‌ ಹೇಳಿದರು.

Leave a Reply

Your email address will not be published. Required fields are marked *