ಕಾಂಗ್ರೆಸ್ ಅದಿನಾಯಕಿ ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೊಳಪಡಿಸುವ ಮೂಲಕ ಕಾಂಗ್ರೆಸ್ ನ ಆತ್ಮಸ್ಥೈರ್ಯವನ್ನು ಕುಂದಿಸಲು ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಬಾಲಕೃಷ್ಣ ಸ್ವಾಮಿಯಾದವ್ ಆರೋಪಿಸಿದರು.
ಅಧಿಕಾರವನ್ನೇ ತ್ಯಾಗ ಮಾಡಿದಂತಹ ಸೋನಿಯಾ ಗಾಂಧಿ ಹೇರಾಲ್ಡ್ ಪ್ರಕರಣದಲ್ಲಿ ಹಣ ಲೂಟಿ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರನ್ನು ಮಾತ್ರ ಗುರಿ ಮಾಡುವ ಬಿಜೆಪಿ ಬಿಜೆಪಿಯ ಸಂಘ ಪರಿವಾರಗಳು ತಪ್ಪು ಮಾಡಿದ್ದರು ಕೂಡ ಅದರ ಬಗ್ಗೆ ಚಕಾರವೆತ್ತದೆ. ಇಡಿ ಮತ್ತು ಸಿಬಿಐ ಗಳನ್ನು ದುರ್ಬಳಕೆ ಮಾಡಿಕೊಂಡು ದೌರ್ಜನ್ಯ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಕಾಂಗ್ರೆಸ್ ಪಕ್ಷ ಬಿಜೆಪಿ ದ್ವೇಷದ ರಾಜಕಾರಣಕ್ಕೆ ಬಗ್ಗುವುದಿಲ್ಲ,ಬೆದರುವುದಿಲ್ಲ, ಜಗ್ಗುವುದಿಲ್ಲ. ಇನ್ನೇನು ಚುನಾವಣೆ ಸಮೀಪಿಸುತ್ತಿದ್ದು, ಜನಾಭಿಪ್ರಾಯಗಳ ಮೂಲಕ ಸೋನಿಯಾ ಮತ್ತು ಕಾಂಗ್ರೆಸ್ ಪಕ್ಷ ಉತ್ತರ ನೀಡಲಿದೆ ಎಂದಿದ್ದಾರೆ
ಸುದ್ದಿ ಜಾಹೀರಾತಿಗೆ ಸಂಪರ್ಕಿಸಿ: 8660924503