ಬಿಜೆಪಿ ವಿರುದ್ದ ಮಾಜಿ ಸಚಿವ ಆಂಜನೇಯ ವಾಗ್ದಾಳಿ

ರಾಜಕೀಯ

ಅಧಿಕಾರನ್ನು ತ್ಯಜಿಸಿದ್ದಂತಹ ಸೋನಿಯಾ ಗಾಂಧಿ ವಿರುದ್ಧ ತನಿಖೆಯನ್ನು ಮಾಡಿಸುವ ಮೂಲಕ ಬಿಜೆಪಿ ಇಡಿ ಹಾಗೂ ಸಿಬಿಐಗಳನ್ನು ದುರುಪಯೋಗಪಡಿಸಿಕೊಂಡು ದೌರ್ಜನ್ಯ ಮಾಡುತ್ತಿದೆ, ಮುಂದಿನ ದಿನಗಳಲ್ಲಿ ಜನರು ಬುದ್ದಿ ಕಲಿಸಿಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಅಧಿಕಾರಕ್ಕೆ ಬರಲಿದೆ ಎಂದು ಸಮಾಜ‌ ಕಲ್ಯಾಣ ಸಚಿವ ಹೆಚ್.ಆಂಜನೇಯ ಹೇಳಿದರು.
ಅವರು ಚಿತ್ರದುರ್ಗದ ಕಾಂಗ್ರೆಸ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

 

 

 


ಅಧಿಕಾರವ‌ನ್ನೆ ತ್ಯಜಿಸಿದ ಸೋನಿಯಾ ಅವರು ಹೇರಾಲ್ಡ್ ಪ್ರಕರಣದಲ್ಲಿ ಹಣವನ್ನು ಪಡೆಯುತ್ತಾರೆಯೇ ಎಂದು ಪ್ರಶ್ನಿಸಿದರು.ಮೊದಲು ರಾಹುಲ್ ಗಾಂದಿಯವರನ್ನು ವಿಚಾರಣೆ ಮಾಡಿದ್ದು, ನಂತರ ಸೋನಿಯಾ ಅವರನ್ನು ವಿಚಾರಣೆಗೆ ಕರೆಯಲಾಗಿದೆ. ಇದರಿಂದ ಎರಡೂ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಂಡಿದ್ದು,ದ್ವೇಷದ ರಾಜಕಾರಣವನ್ನು ಮಾಡುತ್ತಿದೆ. ಇದರ ಜೊತೆಗೆ ಬೆಲೆ ಏರಿಕೆ ಹೆಚ್ಚಾಗಿದ್ದು, ಅಗತ್ಯ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್ ಟಿ ಯಿಂದಾಗಿ ಇಂದು ಬಡ ಜನರ ಬದುಕು ದುಸ್ತರವಾಗಿದೆ. ಈಗಾಗಾಲೇ ಜನರು ಕೂಡ ಬೇಸತ್ತಿದ್ದಾರೆ. ದೌರ್ಜನ್ಯದ ಆಡಳಿತ ನೋಡಿ ಬೇಸತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಬಿಜೆಪಿಗೆ ಬುದ್ದಿ ಕಲಿಸಲು ಜನರು ಸಜ್ಜುಗೊಂಡಿದ್ದಾರೆ. ಬರಲಿರುವ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಗೆ ಆಶೀರ್ವಾದ ಮಾಡಲಿದ್ದು, ನಾವೇ ಎರಡು ಕಡೆಗಳಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದರು. ಎಂದರು

ಸುದ್ದಿಗಾಗಿ ಸಂಪರ್ಕಿಸಿ: 8660924503

Leave a Reply

Your email address will not be published. Required fields are marked *