ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ಮಹಿಳೆ ಎನ್ನಲಾಗಿರುವ ಸಿಡಿ ಲೇಡಿಯ ವೈದ್ಯಕೀಯ ಪರೀಕ್ಷೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಅಂತ್ಯವಾಗಿದೆ.
ಅಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರುಗಳು ಲೈಂಗಿಕ ಸಂಪರ್ಕ, ಸ್ಪರ್ಮ್ ಕೂದಲು, ಉಗುರು ಹೀಗೆ ತನಿಖೆಗೆ ಅಗತ್ಯವಾದವುಗಳನ್ನು ಪಡೆದುಕೊಂಡಿದ್ದು, ಎಸ್ ಐಟಿ ಪೋಲಿಸರ ಮೂಲಕ ಎಫ್ ಎಸ್ ಎಲ್ ಗೆ ಕಳುಹಿಸಿದ್ದಾರೆ. ಇತ್ತ ಸಿಡಿಲೇಡಿಯು ಜೀವ ಭಯದಿಂದ ಓಡಾಡಿದ್ದು ಮಾನಸಿಕವಾಗಿ ಬಳಲಿದ್ದು, ಖಿನ್ನತೆಗೆ ಒಳಗಾಗಿದ್ದಾಳೆ. ವಿಶ್ರಾಂತಿ ನಂತರ ಚೇತರಿಸಿಕೊಳ್ಳಲಿದ್ದಾಳೆ ಎಂದಿದ್ದಾರೆ. ಸಂಜೆ ವೇಳೆಗೆ ಎಸ್ ಐಟಿ ಅಧಿಕಾರಿಗಳು ಸ್ಥಳ ಪರಿಶೀಲನೆ ಡಿಜಿಟಲ್ ಮಹಜರು ಮಾಡಲು ತೆರಳಲಿದ್ದಾಋ.ಇತ್ತ ರಮೇಶ್ ಜಾರಕಿ ಹೊಳಿ ನಾಪತ್ತೆಯಾಗಿದ್ದಾರೆ. ನಿನ್ನೆ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿದ್ದು ಮುಂಬೈ ನಲ್ಲಿದ್ದಾರೆ ಎಂಬ ಮಾಹಿತಿಯೂ ಕೇಳಿಬಂದಿತ್ತು.
ಸಂಯುಕ್ತವಾಣಿ