ನೀನು ನನಗೆ ಮಾತಾಡ್ತಿಯಾ ನಿರಾಣಿಗೆ ಅಂದಿದ್ದು ಯಾರು?

ಜಿಲ್ಲಾ ಸುದ್ದಿ

ಚಿತ್ರದುರ್ಗ: ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಂಚಮಸಾಲಿ ನಾಯಕರ ಸಭೆಯಲ್ಲಿ ಹೂವಿನ ಹಾರ ಹಾಕುವ ವಿಚಾರದಲ್ಲಿ ಸಚಿವ ಮುರುಗೇಶ್ ನಿರಾಣಿ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಡುವೆ ವಾಕ್ಸಮರ ನಡೆದಿದೆ.

Chitradurga  kashappanavar  nirani vaksamara

 

 

ಚಿತ್ರದುರ್ಗ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ನಡೆಯುತ್ತಿರುವ ಪಂಚಮ ಸಾಲಿ ಮುಖಂಡರ ಸಭೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಹಾಗೂ ವಿಜಯಾನಂದ ಕಾಶಪ್ಪನವರ್ ನಡುವೆ ಮಾತಿನ ಚಕಮಕಿ ನಡೆಯಿತು. ಸಚಿವರಿಗೆ ಹೂವಿನ ಹಾರ ಹಾಕುವುದಿಲ್ಲ ಎಂದು ಕಾಶಪ್ಪನವರ್ ನಿರಾಕರಿಸಿದರು. ಮುಂದುವರೆದು
*ನನಗೆ ಮಾತಾಡ್ತೀಯಾ ನೀನು ಎಂದು ನಿರಾಣಿಗೆ ಕಾಶಪ್ಪನವರ್ ತಿರುಗೇಟು ನೀಡಿದರು, ನಿನಗ್ಯಾರು ಮಾತಾನಾಡಿಸಿದ್ದಾರೆ ಎಂದು ಸಚಿವರ ವಿರುದ್ಧ ಕಾಶಪ್ಪನವರ್ ಕೋಪಗೊಂಡರು* ಪರಿಸ್ಥಿತಿ ನಿಯಂತ್ರಿಸಲು ಜಯ‌ಮೃತ್ಯುಂಜಯ ಸ್ವಾಮೀಜಿ ಮನವೊಲಿಸಲು ಪ್ರಯತ್ನಿಸಿದರು.

 

ಸಂಯುಕ್ತವಾಣಿ

Leave a Reply

Your email address will not be published. Required fields are marked *