Chitradurga dkshi open challenge to katil

ಕಟೀಲ್ ತಿರುಗೇಟು ಆಕ್ರೋಶ

ಜಿಲ್ಲಾ ಸುದ್ದಿ

ಚಿತ್ರದುರ್ಗ: -ಸ್ವತಂತ್ರ ಸಂಗ್ರಾಮದ ಹೆಸರಿನಲ್ಲಿ ಬಂದಿರುವ ಕಾಂಗ್ರೆಸ್ ವಿಚಾರ ಸಿದ್ದಾಂತ ಮತೆತಿದ್ದು, ಅಧಿಕಾರಕ್ಕೋಸ್ಕರ ಭಯೋತ್ಪಾದನಾ ಕೃತ್ಯಕ್ಕೆ ಇಳಿದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಡಿ ಕಾರಿದರು.

 

 

Chitradurga katil akrosha

ಅವರು ಚಿತ್ರದುರ್ಗದಲ್ಲಿ ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿಶೋಭಾ ಯಾತ್ರೆಯಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ನಿನ್ನೆ ದೆಹಲಿಯಲ್ಲಿ ರೈತರ ಹೆಸರಲ್ಲಿ ಪ್ರತಿಭಟನಾ, ದಾಂಧಲೆ ಮಾಡುತ್ತಿದ್ದಾರೆ. ರಾಷ್ಟ್ರಭಕ್ತರು, ರೈತರು ಮಾಡುವ ಕಾರ್ಯವಲ್ಲ ಅದು. ರೈತ ಈ ದೇಶದ ಮಣ್ಣಿನ ಮಗ ಸಂವಿಧಾನ ಕಾನೂನು ಗೌರವಿಸುವವನು.ನಾನು ಒಬ್ಬ ಕೃಷಿಕ ರೈತ ಹಕ್ಕುಗಳಿಗಾಗಿ ಹೋರಾಟ ಮಾಡುವುದು ತಪ್ಪಲ್ಲ.ರೈತರ ಹೆಸರಲ್ಲಿ ಪುಂಡಾಟಿಕೆ, ದಾಂಧಲೆ ಮಾಡುವುದು ತಪ್ಪು.ರಾಷ್ಟ್ರಘಾತುಕ ಶಕ್ತಿಗಳು ಹೀಗೆ ಮಾಡಿವೆ. ಕೆಂಪುಕೋಟೆಗೆ ದಾಳಿ‌ಮಾಡಿ
ರಾಷ್ಟ್ರ ಧ್ವಜವನ್ನು ಕಿತ್ತಿದ್ದಾರೆ. ಸಂವಿಧಾನಕ್ಕೆ ಗೌರವ ಕೊಡುವ ದಿನ ಶಾಂತಿಯುತವಾಗಿ ಹೋರಾಟ ಮಾಡುವುದು ತಪ್ಪಲ್ಲ. ಆದರೆ ಇಲ್ಲಿ ರೈತರನ್ನು ದಾರಿ ತಪ್ಪಿಸಿ ಕೆಲವು ರಾಜಕೀಯ ಪಕ್ಷಗಳು ಲಾಭ ಪಡೆಯುವ ಕೆಲಸ ಮಾಡುತ್ತಿವೆ. ಕಾನೂನು ಸಂವಿಧಾನಕ್ಕೆ ಗೌರವ ಕೊಡುವ ಕೆಲಸ ಯಾರೂ ಮಾಡಿಲ್ಲ. ರೈತರ ಹೆಸರಲ್ಲಿ ಅಶಾಂತಿ ನಿರ್ಮಾಣ ಮಾಡುವಂತಹ ಕೆಲಸವನ್ನು ಘಾತುಕ ಶಕ್ತಿಗಳು ಮಾಡಿವೆ. ಇದು ತಬಿಖೆಯಾಗಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಆಗಬೇಕು. ರೈತರು ಬಹಳ ಹುಷಾರಾಗಿ ಇರ್ಬೇಕು. ಕಾಂಗ್ರೆಸ್ ಅಧಿಕಾರ ಇಲ್ಲದಿದ್ದಾಗ ದೇಶದಲ್ಲಿ ಬೆಂಲಿ ಹಾಮುವ ಕೆಲಸ ಮಾಡುತ್ತದೆ.ಅಧಿಕಾರ ಇದ್ದಾಗ ಪ್ರಜಾ ಪ್ರಭುತ್ವದ ಸರ್ಕಾರಗಳನ್ನು ಮಣಿಸುವುದು. ವಿರೋಧ ಪಕ್ಷಗಳನ್ನು ನಾಶ ಮಾಡುವುದು ಅವರ ಪದ್ಧತಿ. ಅಧಿಕಾರ ಹೋದಾಗ ಅಶಾಂತಿ ನಿರ್ಮಿಸಿ ಗಲಭೆ ಸೃಷ್ಠಿಸುವುದು ಅವರ ಹುಟ್ಟು ಗುಣ. ಸಿಎಎ ಗಲಾಟೆಯಲ್ಲಿ ದೇಶಕ್ಕೆ ಬೆಂಕಿ ಹಾಕುವ ಕೆಲಸ ಮಾಡಿದರು. ಪಿಸ್ತೂಲು, ತಲವಾರುಗಳನ್ನು ಒಟ್ಟಿಕೊಂಡು ಹೋಗಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಇದೆ. ಎಂದು ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು
ಸಂಯುಕ್ತವಾಣಿ

Leave a Reply

Your email address will not be published. Required fields are marked *