ಚಿತ್ರದುರ್ಗ: ಕಳೆದ ತಿಂಗಳಲ್ಲಿ ಮನೆ ಬೀಗ ಮುರಿದು ಮನೆಯಲ್ಲಿದ್ದ ಒಡವೆಗಳನ್ನು ದೋಚಿಕೊಂಡು ಹೋಗಿದ್ದ ಕಳ್ಳನನ್ನು ಬಂಧಿಸಿ ಅವನಿಂದ 5 ಲಕ್ಷಕ್ಕು ಹೆಚ್ಚು ಬೆಲೆ ಬಾಳು ಬಂಗಾರದ 124ಗ್ರಾಂ ಒಡವೆಗಳನ್ನು ಗ್ರಾಮಾಂತರ ಠಾಣೆ ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ತಾಲೂಕಿನ ಐನಹಳ್ಳಿ ಗ್ರಾಮದ ಭಾಗ್ಯಮ್ಮ ಎನ್ನುವರ ಮನೆಯ ಬೀಗ ಮುರಿದಿದ್ದ ಸನಾವುಲ್ಲ ಎಂಬ ಕಳ್ಳ ಮನೆಯ ಬೀರುವಿನಲ್ಲಿದ್ದ 3 ಲಕ್ಷ ಬೆಲೆ ಬಾಳು ಬಂಗಾರದ ಒಡವೆಗಳನ್ನು ಹಾಗೂ 70 ಸಾವಿರ ನಗದನ್ನು ಕಳವು ಮಾಡಿದ್ದ, ಇದರ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಗ್ರಾಮಾಂತರ ಠಾಣೆ ಪೋಲಿಸರು ಇವನಿಗಾಗಿ ಬಲೆ ಬೀಸಿದ್ದರು. ನಂತರ ಇವನನ್ನು ಹಿಡಿದು ತಂದು ವಿಚಾರಣೆ ನಡೆಸಿದಾಗ ಇವನ ಜೊತೆ ಒಂದು ತಂಡವಿದ್ದು, ಸುಭಾನ್ ಸಾಬ್, ಪಾಲಯ್ಯ, ಮತ್ತು ದಾದು ಹಾಗೂ ಸನಾವುಲ್ಲಾನ ಹೆಂಡತಿ ಹಸೀನಾಬಿ ಇದ್ದು ತಿಳಿದು ಬಂದಿದೆ. ಸನಾವುಲ್ಲಾನಿಂದ ಒಟ್ಟು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಒಡವೆಗಳನ್ನು ವಶಪಡಿಸಿಕೊಂಡಿದ್ದು, ಉಳಿದವರಿಗಾಗಿ ಶೋಧ ನಡೆಸಿದ್ದಾರೆ ಎಂದು ಎಸ್ಪಿ ರಾಧಿಕಾ ತಿಳಿಸಿದ್ದಾರೆ.
ಸಂಯುಕ್ತವಾಣಿ