ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಬುರುಡೆಕಟ್ಟೆ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿದೆ.
ಬುರುಡೆಕಟ್ಡೆ ಗ್ರಾಮದ ಹೊರವಲಯದಲ್ಲಿ ನೆಲೆಸಿದ್ದ ಚಿರತೆಯೊಂದು ಸಾಕು ಪ್ರಾಣಿಗಳಾದ ನಾಯಿ ಕುರಿಗಳ ಮೇಲೆ ದಾಳಿ ಮಾಡುತ್ತಿದ್ದು. ಇದರಿಂದ ಗ್ರಾಮ ಜನರು ಭಯ ಭೀತರಾಗಿದ್ದರು. ಕಳೆದ ಒಂದು ವಾರದಿಂದ ಗ್ರಾಮದ ಜನರ ಸಹಕಾರದೊಂದಿಗೆ ಅರಣ್ಯ ಇಲಾಖೆಯೂ ಚಿರತೆ ಬಂದು ಹೋಗುವ ಸ್ಥಳದಲ್ಲಿ ಬೋನಿಟ್ಟಿದ್ದು ಇಂದು ಬೋನಿಗೆ ಸೆರೆ ಸಿಕ್ಕಿದೆ. ಇದರಿಂದ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಸಂಯುಕ್ತವಾಣಿ