ಶಿವಮೊಗ್ಗ: ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡಿದರೆ ಕಾಂಗ್ರೆಸ್ ಧೂಳಾಗಿ ಹೋಗ್ತಾರೆ ಎಂದು ಈಶ್ವರಪ್ಪ ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ಇಬ್ಬರು ಆರ್ ಎಸ್ ಎಸ್ ಬಗ್ಗೆ ತಿಳುವಳಿಕೆ ಇಲ್ಲದೆ .ಮಾತನಾಡಿದ್ದಾರೆ. ಆರ್ ಎಸ್ ಎಸ್ ನಿಂದ ಸಂಸ್ಕಾರ ಪಡೆದ ಸಾವಿರಾರು ಜನರು ಇಂದು ಸಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಾತಿ ವಾದಿ ಸಂಘಟನೆ ಎಂದರೆ ಹರಿಪ್ರಸಾದ್ ಛಡ್ಡಿ ಕರಿ ಟೋಪಿ ಹಾಕಿರೋ ಆರ್ ಎಸ್ ಎಸ್ ನವರಿಗೆ ರಾಷ್ಟ್ರ ಧ್ವಜ ಹಾರಿಸಲು ಆರ್ಹತೆ ಇಲ್ಲ ಎಂದಿದ್ದಾರೆ. ಆರ್ ಎಸ್ ಎಸ್ ಜಾತಿ ಸೀಮಿತವಾದ ಸಂಘಟನೆ ಅಲ್ಲ. ರಾಷ್ಟ್ರಾಗಿ ಕಾರ್ಯಕರ್ತರ ಸೃಷ್ಟೀಸುವ ಸಂಘಟನೆ. ದೇಶದ ರಾಷ್ಟ್ರಪತಿ , ಪ್ರಧಾನಿ ಉಪ ಪ್ರಧಾನಿ ಆರ್ ಎಸ್ ಎಸ್ ನಿಂದ ಸಂಸ್ಕಾರ ಪಡೆದಿದ್ದು, ಇದರಿಂದ ಕೆಂಪು ಕೋಟೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಸಚಿವರುಗಳಾಗಿ ಜಿಲ್ಲೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸುತ್ತಿದ್ದಾರೆ. ಮೋದಿ ಯಡಿಯೂರಪ್ಪ ಬಿಜೆಪಿ ಬಗ್ಗೆ ಟೀಕೆ ಮಾಡೋದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಇದೀಗ ಸೋನಿಯಾ ಗಾಂಧಿ ಮೆಚ್ಚಿಸಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ.ಟೀಕೆ ಮಾಡುವುದಾದರೆ ವೈಯುಕ್ತಿಕ ಟೀಕೆ ಮಾಡಲಿ ಅದನ್ನು ಬಿಟ್ಟು ತಿಳುವಳಿಕೆ ಇಲ್ಲದೆ ಮಾತಾನಾಡಬೇಡಿ ಈವರೆಗೆ ಪಕ್ಷ ಹಾಗೂ ಪಕ್ಷದ ನಾಯಕರನ್ನು ಟೀಕೆ ಮಾಡಿದ್ದಕ್ಕೆ ಕಾಂಗ್ರೆಸ್ ಮೂಲೆ ಗುಂಪಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಯುಕ್ತವಾಣಿ