ಚಿತ್ರದುರ್ಗ,ನ05(ಸಂವಾ)- ಬಿಜೆಪಿ ಪೊಕ್ ಅಂಡ್ ಚೂಸ್ ರೀತಿ ಎಲ್ಲಿ ಬಿಜೆಪಿ ಆಡಳಿತ ಪಕ್ಷಕ್ಕೆ ಸಮರ್ಥವಾಗಿ ಕಾಂಗ್ರೆಸ್ ಪಕ್ಷ ಎದುರಿಸುತ್ತಿದ್ದವೆ ಇಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ,ಮೊದಲು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿ ಮೇಲೆ ದಾಳಿಯಾಯ್ತು ಇದೀಗ ವಿನಯ ಹಾಗೂ ವಿಜಯ್ ಕುಲಕರ್ಣಿ ಅವರನ್ನು ಪಿಕ್ ಮಾಡಿಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಗ್ಗೆ ಪ್ರಶ್ನೆ ಮಾಡುವ ಕಡೆಗೆ ಇಂತಹ ಬೆದರಿಕೆ ತಂತ್ರವನ್ನು ಅನುಸರಿಸುತ್ತಿದ್ದಾರೆ. ನಾವು ಬಿಜೆಪಿಯ ಯಾವುದೇ ಪ್ರಜರ್ ಟ್ಯಾಕ್ ಟಿಕ್ ಗೆ ಬಗ್ಗೋದಿಲ್ಲ. ಪ್ರಜಾ ಪ್ರಭುತ್ವದಲ್ಲಿ ಪ್ರಶ್ನೆ .ಮಾಡೋ ಹಕ್ಕಿದೆ ನಾವು ಪ್ರಶ್ನೆ ಮಾಡುತ್ತವೆ. ಇನ್ನು ಜಯಚಂದ್ರ ಅವರು ಮಂತ್ರಿಗಳಾಗಿದ್ದಾಗ ಅವರು ಹತ್ತು ಹಲವು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಇದು ಶಿರಾದಲ್ಲಿ ಅವರ ಗೆಲುವಿಗೆ ಕಾರಣವಾಗಲಿದೆ. ಇನ್ನು ಆರ್ ಆರ್ ಕ್ಷೇತ್ರದಲ್ಲಿ ಮುನಿರತ್ನ ಅವರ ದುರಾಡಳಿದಿಂದಾಗಿ ಜನರು ಬೇಸತ್ತಿದ್ದಾಋ. ಇದರಿಂದ ಅಲ್ಲಿ ಕುಸುಮಾ ವರ ಪರವಾಗಿ ಅಲೆ ಇದೆ. ಅಲ್ಲೂ ಕೂಡ ನಾವು ಗೆಲ್ಲುತ್ತೆವೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಖಚಿತ ಎಂದು ಹೇಳಿದರು.
ಸಂಯುಕ್ತವಾಣಿ.
ಡಿ.ಕುಮಾರಸ್ವಾಮಿ