ಶೀಲ‌ಶಂಕಿಸಿ ಕೊಲೆಗೈದ ಪಾಪಿ‌ ಪತಿಗೆ ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಲಯ

ರಾಜ್ಯ

ಚಿತ್ರದುರ್ಗ: ಶೀಲ‌ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರೋಣ್ ವಾಸುದೇವ್ ಅವರು ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ. ದಂಡ ಪಾವತಿಸಲು ವಿಫಲವಾದಲ್ಲಿ ಒಂದು ವರ್ಷ ಕಠಿಣ ಸಜೆ  ನೀಡಿ ತೀರ್ಪು ನೀಡಿದ್ದಾರೆ. ಆರೋಪಿ ಮೆಹಬೂಬ್ ಪಾಷಾ ತನ್ನ ಪತ್ನಿ‌ ಅಮೀನಾಭಾನು ‌ಶೀಲ‌ ಶಂಕಿಸಿ ಚಳ್ಳಕೆರೆ ರಸ್ತೆಯ ಶ್ರೀರಂಗ ಪೆಟ್ರೋಲ್ ಬಂಕ್ ಬಳಿ 2021 ರಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ, ಬಡಾವಣೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ಧು, ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಸರ್ಕಾರಿ ಪ್ರಧಾನ ಅಭಿಯೋಜಕರಾದ ಗಣೇಶ್ ನಾಯ್ಕ್ ವಾದ ಮಂಡಿಸಿದ್ದರು.

 

 

Leave a Reply

Your email address will not be published. Required fields are marked *