ಹಿರಿಯೂರಿನಲ್ಲಿ ತಂಬಾಕು ದಾಳಿ: 21 ಪ್ರಕರಣಗಳು ದಾಖಲು

ರಾಜ್ಯ

ಜಿಲ್ಲಾ ತಂಬಾಕು ನಿಯಂತ್ರಣ ಕೋಶ,ಚಿತ್ರದುರ್ಗ ಮತ್ತು ತಾಲೂಕು ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಹಾಗೂ ಪೊಲೀಸ್ ಇಲಾಖೆ, ವತಿಯಿಂದ ಇಂದು ಹಿರಿಯೂರಿನ ಬೆಂಗಳೂರು ರಸ್ತೆಯಲ್ಲಿ ಅಂಗಡಿಗಳ ಮೇಲೆ ತಂಬಾಕು ದಾಳಿ ನಡೆಸಿ ಕಲಂ 4 ರ ಅಡಿಯಲ್ಲಿ 19 ಪ್ರಕರಣಗಳನ್ನು ದಾಖಲಿಸಿ ರೂ.1700/- ದಂಡವನ್ನು, ಕಲಂ 6ಎ ರ ಅಡಿಯಲ್ಲಿ 2 ಪ್ರಕರಣಗಳನ್ನು ದಾಖಲಿಸಿ 400 ದಂಡವನ್ನು,
ಒಟ್ಟು ರೂ.2100/- ದಂಡವನ್ನು ಸಂಗ್ರಹಿಸಲಾಗಿದೆ.
ಈ ತಂಬಾಕು ದಾಳಿಯಲ್ಲಿ ಜಿಲ್ಲಾ ಸಲಹೆಗಾರರಾದ ಬಿ ಎಂ ಪ್ರಭುದೇವ್ ಹಾಗೂ ರಮೇಶ್ ಆರೋಗ್ಯ ನಿರೀಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಹಿರಿಯೂರು ಮತ್ತು ತಿಪ್ಪೇಸ್ವಾಮಿ ಕೆ ಎಂ. ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಚಿತ್ರದುರ್ಗ ಹಾಗೂ ಪೊಲೀಸ್ ಇಲಾಖೆಯ ಗೃಹ ರಕ್ಷಕ ದಳದ ವತಿಯಿಂದ ಶ್ರೀಮತಿ ಲಕ್ಷ್ಮಿ ಮತ್ತು ಶ್ರೀಮತಿ ಲಕ್ಷ್ಮೀಬಾಯಿ ಪಾಲ್ಗೊಂಡಿದ್ದರು.

 

 

Leave a Reply

Your email address will not be published. Required fields are marked *