ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕವು ಲಂಕೇಶ್ ವಿಚಾರ ವೇದಿಕೆ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗು ನಾಡು ನುಡಿಬಳಗ ಸಹಯೋಗದಲ್ಲಿ 01-09-24 ರಂದು ಸೋಮವಾರ ಸಂಜೆ 6 ಗಂಟೆಗೆ ನಗರದ ತರಾಸು ರಂಗ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ವ ಡಿ. ಸುಧಾಕರ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ ಸಿ ವೀರೇಂದ್ರಪಪ್ಪಿ ವಹಿಸಲಿದ್ದಾರೆ. ನಾಟಕದ ಪೋಸ್ಟರ್ ಬಿಡುಗಡೆಯನ್ನು ಜೆಡಿಎಸ್ ಮುಖಂಡ ಬಿ.ಕಾಂತರಾಜ್ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿಟಿ ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಸೋಮಶೇಖರ್,ಎಸ್ಪಿ ರಂಜಿತ್ ಕುಮಾರ್ ಬಂಡಾರು,ನಾಟಕ ನಿರ್ದೇಶಕ ಕೆ ಪಿಲಕ್ಷ್ಮಣ್, ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತರಾದ ಚಿಕ್ಕಪ್ಪನ ಹಳ್ಳಿ ಷಣ್ಮುಖ, ಮಾಧ್ಯಮಅಕಾಡೆಮಿ ಸದಸ್ಯರು ಹಿರಿಯ ಪತ್ರಕರ್ತರಾದ ಎಂ ಎನ್ ಅಹೋಬಲಪತಿ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ ದಿನೇಶ್ ಗೌಡಗೆರೆ,ವಕೀಲ ಡಿಎನ್ ರಾಜು ದಾಸರಹಳ್ಳಿ ಭಾಗವಹಿಸಲಿದ್ದಾರೆ. ಪ್ರಾಸ್ತಾವಿಕ ನುಡಿಯನ್ನು ಸಾಮಾಜಿಕ ಚಿಂತಕ ಸಂತೋಷ್ ಕೋಡಿಹಳ್ಳಿ ಮಾತಾಡಲಿದ್ದಾರೆ.