ಪ್ರತೀ ಬಾರಿ ಮುಖ್ಯ ಮಂತ್ರಿ ಪದಕದ ಪ್ರಶಸ್ತಿಗೆ, ಆಯ್ಕೆ ಮಾಡುವಂತೆ ಸರ್ಕಾರ ಮುಖ್ಯ ಮಂತ್ರಿಗಳ ಪದಕಕ್ಕೆ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡುತ್ತಿದ್ದು, ಈ ಬಾರಿ ಚಿತ್ರದುರ್ಗದ ಡಿಎಆರ್ ಡಿವೈಎಸ್ಪಿ ಗಣೇಶ್ ಎಸ್ ಎಸ್ ಹಾಗೂ ಐಮಂಗಲದ ಪಿಟಿಎಸ್ ನ ಎ ಆರ್ ಎಸ್ ಐ ಶ್ರೀಧರ್ ಆಯ್ಕೆಯಾಗಿದ್ದಾರೆ. ರಾಜ್ಯದಾದ್ಯಂತ ಮುಖ್ಯ ಮಂತ್ರಿಗಳ ಪದಕದ ಗೌರವಕ್ಕೆ 126 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯ್ಕೆಯಾಗಿದ್ದು, ಆಯ್ಕೆಗೊಂಡ ಅಧಿಕಾರಿಗಳಿಗೆ ಪದಕ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದೆ.