ಪೊಲೀಸ್ ಜೀಪ್ ಮೇಲೆ ಕಲ್ಲು ತೂರಿದ ಕಳ್ಳರು ಪೊಲೀಸರ ಏರ್ ಫೈರ್ ಗೂ ಬೆದರದೆ ತಪ್ಪಿಸಿಕೊಂಡಿರುವ ಘಟನೆ ಕುದಾಪುರದ ಬಳಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರದ ಕಳ್ಳರನ್ನು ಹಿಡಿಯಲು ಕಳ್ಳರಿದ್ದ ಬುಲೆರೋ ವಾಹನವನ್ನು ಅಡ್ಡಗಟ್ಟಿದ್ದಾರೆ. ಇದರಿಂದ ಬೆದರಿದ ಕಳ್ಳರು, ಏಕಾಏಕಿ ಪೊಲೀಸರ ಮೇಲೆ ದಾಳಿ ಮಾಡಿ, ಕಲ್ಲು ತೂರಿದ್ದಾರೆ. ಪೊಲೀಸರು ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕಳ್ಳರು ಕಲ್ಲು ತೂರಿದ್ದರಿಂದ ಪೊಲೀಸರ ಜೀಪಿನ ಗ್ಲಾಸ್ ಪುಡಿ ಪುಡಿಯಾಗಿದೆ. ಸುಮಾರು 7 ಮಂದಿ ಆಂಧ್ರ ಪ್ರದೇಶದ ನೋಂದಣಿಯಿರುವ, ಬುಲೆರೋ ವಾಹನದಲ್ಲಿ ಬಂದಿದ್ದರು. ಇದನ್ನು ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ ನಾಯಕನಹಟ್ಟಿ ಪೊಲೀಸರು, ವಾಹನ ತಡೆದು ಪರಿಶೀಲನೆಗೆ ಮುಂದಾಗಿದ್ದಾರೆ. ಆದರೆ ವಾಹನ ನಿಲ್ಲಿಸದ ಕಳ್ಳರು, ಪೊಲೀಸರ ಕಡೆಗೆ ಕಲ್ಲು ತೂರಲು ಆರಂಭಿಸಿದ್ದಾರೆ. ದರೋಡೆಕೋರರ ಗುಂಪೆಂದು ಶಂಕಿಸಿದ ಪೊಲೀಸರು ಅಲರ್ಟ್ ಆಗಿ, ಬೋಸೇ ದೇವರಹಟ್ಟಿ ಕೋಟೆ ನಗರದ ಒಳ ಮಾರ್ಗದಲ್ಲಿ ಕುದಾಪುರದ ಕಡೆಗೆ ಬರುತ್ತಿದ್ದ ಕಳ್ಳರಿಗೆ ಪೊಲೀಸರು ಮನಮೈನ ಹಟ್ಟಿಕಡೆಗೆ ಎದುರಾಗಿದ ನಾಯಕನಹಟ್ಟಿ ಪಿಎಸ್ಐ ಶಿವಕುಮಾರ್ ತಂಡ ಬುಲೆರೋ ವಾಹನದಲ್ಲಿ ಬಂದಿದ್ದ ಕಳ್ಳರನ್ನು ಹಿಡಿಯಲು ಮುಂದಾಗಿದ್ದು, ಕಳ್ಳರು ಹಿರೇ ಹಳ್ಳಿ, ಬೇಡರೆಡ್ಡಿ ಹಳ್ಳಿ, ಬುಕ್ಕಾಂಬುದಿ ಮಾರ್ಗವಾಗಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ, ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಪರಿಶೀಲಿಸಿದ್ದಾರೆ. ರಾತ್ರಿ ನಡೆದ ಘಟನೆಯಸುದ್ದಿ ತಿಳಿದ ಸ್ಥಳೀಯರು ಆತಂಕಗೊಂಡಿದ್ದಾರೆ ಎಂದು ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.