ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ, ದರ್ಶನ್ ಅಂಡ್ ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾ ಸ್ವಾಮಿ ಪೋಷಕರು.
ಚಿತ್ರನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಹತ್ಯೆಗೊಳಗಾದ ಚಿತ್ರದುರ್ಗದ ರೇಣುಕಾ ಸ್ವಾಮಿಯ ಪೋಷಕರು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು, ಭೇಟಿಯಾಗಿ ತಮ್ಮ ಗೋಳನ್ನು ಹೇಳಿಕೊಂಡರು. ನಮ್ಮ ಮಗ ರೇಣುಕಾ ಸ್ವಾಮಿ ಏನಾದ್ರೂ ತಪ್ಪು ಮಾಡಿದ್ದರೆ, ಅವನಿಗೆ ಕರೆದು ಬುದ್ಧಿ ಹೇಳಬಹುದಾಗಿತ್ತು. ತಿದ್ದಬಹುದಾಗಿತ್ತು. ಆದರೆ ಅವನಿಗೆ ಚಿತ್ರ ಹಿಂಸೆ ಕೊಟ್ಟು, ಹಲ್ಲೆ ಮಾಡಿ ಬರ್ಬರವಾಗಿ ಕೊಲೆಯನ್ನು ಮಾಡಲಾಗಿದೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ತಮ್ಮ ಮಗ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದು, ಈಗ ದುಡಿಮೆಯೇ ಇಲ್ಲದಂತಾಗಿದೆ. ಮಗನನ್ನು ಕಳೆದುಕೊಂಡಿದ್ದು, ಸೊಸೆಯೂ ಕೂಡ ಗರ್ಭಿಣಿಯಾಗಿದ್ದು,ಮಗು ಮತ್ತು ಸೊಸೆಯ ಭವಿಷ್ಯಕ್ಕಾಗಿ ಸೊಸೆಗೆ, ಒಂದು ಸರ್ಕಾರಿ ಉದ್ಯೋಗವನ್ನು ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಪೋಷಕರು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅವರು, ಸೊಸೆಗೆ ಸರ್ಕಾರಿ ಉದ್ಯೋಗವನ್ನು ನೀಡುವ ಭರವಸೆಯನ್ನು ನೀಡಿದರು ಎನ್ನಲಾಗಿದೆ. ಈ ಸಮಯದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಮಾಜಿ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಹಾಗೂ ಇನ್ನಿತರರಿದ್ದರು.