ರೇಣುಕಾ ಸ್ವಾಮಿ ಕುಟುಂಬಕ್ಕೆ ಧನ ಸಹಾಯ ಮಾಡಿದ ಯೂಟೂಬರ್ ಮಹೇಶ್

ರಾಜ್ಯ

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾರ್ವಜನಿಕರು ಸಂಘ ಸಂಸ್ಥೆಗಳು ಅವರ ಕುಟುಂಬದವರನ್ನು ಭೇಟಿ‌ ಮಾಡಿ ಸಾಂತ್ವಾನ ಹೇಳುತ್ತಿದ್ದಾರೆ. ಅದೇ ರೀತಿ ತಮ್ಮ ಕೈಲಾದಷ್ಟು ಧನ ಸಹಾಯ ಮಾಡುತ್ತಾ, ಕುಟುಂಬದವರಿಗೆ ಧೈರ್ಯ ತುಂಬುತ್ತಿದ್ದಾರೆ. ಇಂದು ಕೂಡ ಬೆಂಗಳೂರಿನ ಯು ಟೂಬರ್ ಮಹೇಶ್ ಎನ್ನುವವರು ರೇಣುಕಾಸ್ವಾಮಿ‌ ಅವರ ಮನೆಗೆ ಭೇಟಿ‌ ನೀಡಿ ಪತ್ನಿ ಸಹನಾ, ತಂದೆತಾಯಿಗೆ ಸಾಂತ್ವಾನದ ಜೊತೆಗೆ ಧೈರ್ಯ ಹೇಳುವ ಮೂಲಕ 73 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದಾರೆ.

 

 

Leave a Reply

Your email address will not be published. Required fields are marked *