ಭೋವಿ ಅಭಿವೃದ್ಧಿ ನಿಗಮದ ಕೋಟಿ ಕೋಟಿ ಹಣ ನುಂಗಿದ ಕೋಟ ಶ್ರೀನಿವಾಸ ಪೂಜಾರಿ
ಕೋಟಾ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದಾಗ ಭೋವಿ ಅಭಿವೃದ್ದಿ ನಿಗಮದಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ.ಇದನ್ನು ಹೈಕೋರ್ಟ್ ಅಥವ ಸುಪ್ರೀಂ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ನೆಡೆಸಬೇಕೆಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಒತ್ತಾಯಿಸಿದ್ದಾರೆ. ಅವರು ಧ್ವನಿಮುದ್ರಣದ ಮೂಲಕ ಹೇಳಿಕೆಯನ್ನು ಹರಿಬಿಟ್ಟಿದ್ದಾರೆ. ರಾಜ್ಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 180 ಕೋಟಿ ಹಗರಣ ನಡೆದಿದೆ ಎಂದು ಸದ್ದು ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ತನಿಖೆ ನೆಡೆಸಲು ವಹಿಸಿದ್ದು, ಇದೀಗ ರಾಜ್ಯದ ಎಲ್ಲೆಡೆ ಈ ವಿಚಾರ ದೊಡ್ಡ ಸದ್ದು ಮಾಡಿದೆ. ಇದರ ಬೆನ್ನಲ್ಲೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಕೊಡುವಂತೆ ಪ್ರತಿಭಟನೆ ಒತ್ತಾಯ ಹೆಚ್ಚಾಗಿದೆ. ಆದರೆ ಇತ್ತ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ನಮ್ಮ ಬಿಜೆಪಿ ಸರ್ಕಾರವಿದ್ದಾಗ ಕೋಟಾ ಶ್ರೀನಿವಾಸ್ ಪೂಜಾರಿ ಸಚಿವರಾಗಿದ್ದಾಗ ಅವರು ನೂರಾರು ಕೋಟಿ ನುಂಗಿದ್ದಾರೆ. ಇದರ ತನಿಖೆಯನ್ನು ಆಂದಿನ ಸಿಎಂ ಬೊಮ್ಮಾಯಿ ಅವರು, ಸಿಓಡಿಗೆ ವಹಿಸಿದ್ದರು, ಆದರೆ ಕಾಂಗ್ರೆಸ್ ಸರ್ಕಾರ ಬಂದು ಸಿದ್ದರಾಮಯ್ಯ, ಸಿಎಂ ಆದಾಗ ಅದರ ತನಿಖೆಯನ್ನು ನಿಲ್ಲಿಸಿದ್ದಾರೆ. ತನಿಖೆಯನ್ನು ಯಾಕೆ ನಿಲ್ಲಿಸಿದ್ದಿರಾ? ಭೋವಿ ಅಭಿವೃದ್ದಿ ನಿಗಮದಲ್ಲಿ ಆಗಿರುವ ನೂರು ಕೋಟಿ ಹಗರಣ, ವಾಲ್ಮೀಕಿ ಅಭಿವೃದ್ದಿ ನಿಗಮವೂ ಸೇರಿದಂತೆ ಇನ್ನಿತರೇ ನಿಗಮಗಳಲ್ಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ, ಆಗ ಸತ್ಯ ಬಯಲಿಗೆ ಬರುತ್ತದೆ. ಕೋಟಾ ಶ್ರೀನಿವಾಸ್ ಪೂಜಾರಿ,ಹಣ ತಿಂದಿದ್ದಾರೆ ಎಂದು ನಾನು ನೇರವಾಗಿ ಹೇಳಿದ್ದೇನೆ. ಆದರೆ ತನಿಖೆ ನಡೆದರೆ ಅವರು ಎಷ್ಟು ಹಣ ತಿಂದಿದ್ದಾರೆ ಎಂದು ತಿಳಿಯಲಿದೆ. ಕೋಟಾ ಶ್ರೀನಿವಾಸ ಪೂಜಾರಿ ಬಹಳ ಪ್ರಮಾಣಿಕರು, ಅವರಷ್ಟು ಪ್ರಾಮಾಣಿಕರು ದೇಶದಲ್ಲಿ ಯಾರು ಇಲ್ಲ ಎಂದು ವ್ಯಂಗ್ಯವಾಡಿದರು.ಚುನಾವಣೆಯ ಸಮಯದಲ್ಲಿ ಅವರಿಗೆ 50 ರಿಂದ 60 ಕೋಟಿ ಎಲ್ಲಿಂದ ಬಂತು ಎಂದು ಅವರು ಹೇಳಲೇ ಇಲ್ಲ. ಭೋವಿ ಅಭಿವೃದ್ದಿ ನಿಗಮದ ಹಣ ನುಂಗಿದವರಲ್ಲಿ ನಮ್ಮ ಸಮಾಜದ ಎಂಎಲ್ ಸಿ ಅವರ ಪುತ್ರನೂ ಇದ್ದಾರೆ. ಇದರಲ್ಲಿ ಇಬ್ಬರ ಕೊಲೆಯಾಗಿದೆ. ಇಂತಹ ಹಗರಣವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಆರ್ . ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ಧೈರ್ಯವಿದ್ದರೆ, ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆ ನಡೆಸಲಿ ಎಂದು ಸವಾಲಾಕಿದ್ದಾರೆ. ಆದರೆ ಇವರಿಗೆ ಕಾಣುವುದು, ಕೇವಲ ಎಸ್ಸಿಎಸ್ಟಿ ಸಮಾಜದವರು ಮಾತ್ರ, ಇದೀಗ ಎಸ್ಟಿ ಸಮಾಜದ ನಾಗೇಂದ್ರ ಅವರನ್ನು ಗುರಿಯಾಗಿಸಿದ್ದಾರೆ. ನೀವು ನಾಗೇಂದ್ರ ರಾಜೀನಾಮೆ ಕೇಳಿದ್ದೀರಲ್ವಾ? ಎಸ್ಸಿ ಎಸ್ಟಿಗಳು ನಾವೇನು ಕರ್ಮಮಾಡಿ ಹುಟ್ಟಿದ್ದೀವಾ ಎಂದು ಆಕ್ರೋಶ ಹೊರಗೆ ಹಾಕಿದ್ದಾರೆ.