ಬಿಜೆಪಿ ರಾಜ್ಯಾಧ್ಯಕ್ಷರು ಸಚಿವರ ವೈಯಕ್ತಿಕ ತೆಜೋವಧೆ ಮಾಡಬಾರದು

ಆರೋಗ್ಯ

 

ರಾಜ್ಯದ ಶಿಕ್ಷಣ ಸಚಿವರ ಅಂದ ಚಂದದ ಬಗ್ಗೆ ಮಾತನಾಡುವ ಬದಲು ರಾಜ್ಯದ ಅಭೀವೃದ್ದಿಯ ಬಗ್ಗೆ ಚಿಂತನೆಯನ್ನು ನಡೆಸಿ, ನಮ್ಮ ದೇಶದ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂರವರು ಹೇಗಿದ್ದರು, ಅವರಿಂದ ದೇಶ ಪ್ರಗತಿಯನ್ನು ಕಂಡಿಲ್ಲವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜೇಯೇಂದ್ರರವರ ಮಾತಿಗೆ ಕಾಂಗ್ರೆಸ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಜಿಲ್ಲಾಧ್ಯಕ್ಷರಾದ ಮುದಾಸಿರ್ ನವಾಜ್ ತಿರುಗೇಟು ನೀಡಿದ್ದಾರೆ.

 

 

ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಚಿತ್ರದುರ್ಗ ನಗರದಲ್ಲಿ ಬಿಜೆಪಿವತಿಯಿಂದ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ, ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ರವರು ರಾಜ್ಯದ ಶಿಕ್ಷಣ ಸಚಿವರು ಮೂದಲು ತೆಲೆಯನ್ನು ಬಾಚಿ ಕೊಳ್ಳಲಿ, ಹೇರ ಕಟಿಂಗ್ ಮಾಡಿಸಿ ಕೊಳ್ಳಲಿ ಎಂದು ಅವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡಿದ್ದಾರೆ. ಇದು ಸರಿಯಲ್ಲ‌.   ಆಡಳಿತದಲ್ಲಿ ಏನಾದರೂ ದೋಷ ಇದ್ದರೆ ತಿಳಿಸಿ, ಇದು ಬಿಟ್ಟು ಅವರ ವೈಯುತ್ತಿಕ ಬದುಕಿನ ಬಗ್ಗೆ  ಮಾತನಾಡುವುದು ಸರಿಯಲ್ಲ ನೀವು ರಾಜ್ಯಾಧ್ಯಕ್ಷರಾಗಿ ನಿಮ್ಮ ಪಕ್ಷವನ್ನು ಸಂಘಟಿಸಿ, ಅದು ಬಿಟ್ಟು ನಮ್ಮ ಪಕ್ಷದ ನಾಯಕರು, ಸಚಿವರನ್ನು ಟೀಕಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರೆ ನಮ್ಮ ಪಕ್ಷದ ಯಾವುದೇ ಮುಖಂಡರಾಗಲಿ ಸಚಿವರ ಬಗ್ಗೆ ಅವಹೇಳಕಾರಿ ಮಾತುಗಳನ್ನಾಡಿದರೆ,  ನಿಮ್ಮ ವಿರುದ್ದ ಹೋರಾಟವನ್ನು ಮಾಡಲಾಗುವುದು, ಮುಂದಿನ  ದಿನದಲ್ಲಿ ಮಾತನಾಡುವಾಗ ಎಚ್ಚರದಿಂದ ಮಾತನಾಡುವಂತೆ ಮುದಾಸಿರ್ ನವಾಜ್ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕಿವಿ ಮಾತು ಹೇಳಿದ್ದಾರೆ.  

Leave a Reply

Your email address will not be published. Required fields are marked *