ಮಾಜಿ ಸಚಿವ ಹೆಚ್ ಆಂಜನೇಯರನ್ನು ಎಂಎಲ್ ಸಿ ಮಾಡಿ: ಆಂಜನೇಯ ಅಭಿಮಾನಿ ಬಳಗದಿಂದ ಒತ್ತಾಯ

ರಾಜ್ಯ

ಮಾಜಿ ಸಚಿವ ಹೆಚ್ ಆಂಜನೇಯ ಅವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅಲ್ಲದೆ ಅವರು ರಾಜ್ಯ ಮಟ್ಟದ ಅಂಗ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ್ದು, ಇದೀಗ ಕೆಪಿಸಿಸಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚುನಾವಣೆಗಳಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಕಂಡಿದ್ದಾರೆ. ಅಷ್ಟೆ ಅಲ್ಲದೆ ಪಕ್ಷ ದ ಅಭಿವೃದ್ದಿಗೆ ಹಾಗು ಕಾರ್ಯಕರ್ತರ ಏಳಿಗೆಗೆ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಇವರು ಹೊಳಲ್ಕೆರೆ, ಭರಮಸಾಗರ ಚಿತ್ರದುರ್ಗ ಜಿಲ್ಲೆ ಅಷ್ಟೆ ಅಲ್ಲ, ರಾಜ್ಯದಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ಇವರ ಸೇವೆ ಪಕ್ಷಕ್ಕೆ ಬಹಳ ಅಗತ್ಯವಿದೆ. ಹಾಗೆಯೇ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರ ಹಾಗೂ ಮಹಿಳೆಯರು ಮತ್ತು ರೈತರ ಪರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಬರುವ 13 ರಂದು ನೆಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ,ಇವರನ್ನು ವಿಶೇಷವಾಗಿ ಸ್ಥಾನ‌ ನೀಡುವ ಮೂಲಕ ಪರಿಗಣಿಸಬೇಕು ಎಂದು ಆಂಜನೇಯ ಅಭಿಮಾನಿಗಳ ಬಳಗದಿಂದ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ ಹೇಳಿದರು. ಅವರು ಚಿತ್ರದುರ್ಗ ದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಆಂಜ‌ನೇಯ ಅವರ ಕೊಡುಗೆ ಅಪಾರವಾದದ್ದು,ಇದರಿಂದ ಕಾಂಗ್ರೆಸ್ ಅಧ್ಯಕ್ಷರಾದ ಖರ್ಗೆ , ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿಗಳಾದ ಸುರ್ಜೇವಾಲ ಅವರು ಆಂಜನೇಯ ಅವರ ಕೊಡುಗೆಯನ್ನು ಪರಿಗಣಿಸಿ ಅವರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡುವಂತೆ ಒತ್ತಾಯಿಸಿದರು. ಜಿಲ್ಲೆಯಷ್ಟೆ ಅಲ್ಲ ರಾಜ್ಯದ ಬಗ್ಗೆ ಬದ್ದತೆ ಇರುವ ರಾಜಕಾರಣಿ ವಿಧಾನ ಸೌಧದಲ್ಲಿರಬೇಕು ಎಂದು ನಾವು ಬಯಸುತ್ತೇವೆ ಎಂದರು.
ಈ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಮೂರ್ತಿ, ಸಾಮಾಜಿ ನ್ಯಾಯ ಸಮಿತಿ ಅಧ್ಯಕ್ಷ ನರಸಿಂಹ ಮೂರ್ತಿ ಮತ್ತು ತಾಳ್ಯ ಶಿವಮೂರ್ತಿ ಇದ್ದರು.

 

 

Leave a Reply

Your email address will not be published. Required fields are marked *