ಕಲ್ಲಿನ ಸ್ವರೂಪದಲ್ಲಿ ಬಂದು ಕಾರ್ಮಿಕನ ಬಲಿ‌ ಪಡೆದ ಜವರಾಯ

ಆರೋಗ್ಯ

ಕೆರೆಯಲ್ಲಿ ಈಜಲು ಹೋಗಿದ್ದ ವ್ಯಕ್ತಿಯೊಬ್ಬನ ತಲೆಗೆ ಕಲ್ಲು ಬಡಿದು, ವ್ಯಕ್ತಿಯು ಮೃತಪಟ್ಟಿರುವ ಘಟನೆ ಚಿತ್ರದುರ್ಗದ ಕಾತ್ರಾಳು ಕೆರೆಯಲ್ಲಿ ನಡೆದಿದೆ.
ಮೃತನ ಹೆಸರು ತಿಳಿದು ಬಂದಿಲ್ಲ, ಆದರೆ ಮೃತ ವ್ಯಕ್ತಿಯು, ಆಂಧ್ರಪ್ರದೇಶದ ಭದ್ರಾಚಲಂ ನವನು ಎಂದು ಗುರುತಿಸಲಾಗಿದೆ. ಈತ ಬೋರ್ವೆಲ್ ನಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕ ನಾಗಿದ್ದಾನೆ. ಕಾತ್ರಾಳು ಕೆರೆಯ ಬಳಿಯ ಜಗಳೂರು ರಸ್ತೆಯಲ್ಲಿ ಬೋರ್ವೆಲ್ ಲಾರಿ ಕೆಟ್ಟು ನಿಂತಿತ್ತು. ಅದನ್ನು ರಿಪೇರಿ ಮಾಡಿಸುತ್ತಿದ್ದು,ಈ ಸಮಯದಲ್ಲಿ ಕುಡಿದ ಮತ್ತಿನಲ್ಲಿದ್ದ ಎಂಟು ಜನರು ಕಾರ್ಮಿಕರು ಈಜಲು ಹೋಗಿದ್ದರು. ಆಗ ಮೃತ ವ್ಯಕ್ತಿಯು ಈಜಲು ನೀರಿನಲ್ಲಿ ಧುಮುಕಿದಾಗ ನೀರಿನಲ್ಲಿದ್ದ ಕಲ್ಲಿನಿಂದ ತಲೆಗೆ ಪೆಟ್ಟು ಬಿದ್ದು, ಮೃತಪಟ್ಟಿದ್ದಾನೆ. ಮೃತನ ಶವವನ್ನು ಮೇಲೆತ್ತಿರುವ
ಭರಮಸಾಗರದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

 

 

Leave a Reply

Your email address will not be published. Required fields are marked *