ನಿಮ್ಮಿಂದಾಗಿ ನನಗೆ ರಾಜಕಾರಣದಲ್ಲಿ ನಿರಾಸಕ್ತಿ ಮೂಡುತ್ತಿದೆ

ರಾಜ್ಯ

 

 

 

ನಿಮ್ಮಂತಹ ಅಧಿಕಾರಿಗಳಿಂದ ನನಗೆ ಜಿಲ್ಲಾಡಳಿತಕ್ಕೆ ಅವಮಾನವಾಗುತ್ತಿದೆ. ನೀವು ಮಾಹಿತಿ ಇಲ್ಲದೆ ಸಭೆಗೆ ಬರುವ ಅಗತ್ಯವಿಲ್ಲ ನಿಮ್ಮ ಬೇಜವಾಬ್ದಾರಿತನದಿಂದಾಗಿ ನಾನು ರಾಜಕಾರಣದಲ್ಲಿ ಇರಲು ನಿರಾಸಕ್ತನಾಗಿದ್ದೇನೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ದಿಶಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತಾಡಿದರು.ಒಬ್ಬ ಅಧಿಕಾರಿಗೆ ಏನು ಮಾಹಿತಿ ಇರಬೇಕೋ ಅದು‌ ನಿಮಗಿಲ್ಲ, ಯೋಜನೆ ಏನಾಗಿದೆ ಅದಕ್ಕೆ ಸಂಬಂಧಿಸಿದಂತೆ ಅನುದಾನ ಹೊಂದಾಣಿಕೆ ಎಷ್ಟಾಗಿದೆ. ನಾನೆಷ್ಟು ಮ್ಯಾಚಿಂಗ್ ಮಾಡಬೇಕು ಎಂದು ತಿಳಿದುಕೊಳ್ಳಬೇಕು.ನಿಮಗೆ ಬದ್ದತೆ ಇಲ್ಲ, ಆದರೆ ನಾನು ಬದ್ದತೆ ಇಲ್ಲದೆ ಮಾತಾಡುವುದಿಲ್ಲ, ಇದಕ್ಕೆ ನನಗೆ ರಾಜಕೀಯ ನಿರಾಸಕ್ತಿ ಬಂದಿದೆ. ನುಡಿದಂತೆ ನಡೆಯಬೇಕು, ಇಲ್ಲದೆ ಹೋದರೆ ಬರಬಾರದು, ನಿಮ್ಮಗಳಿಂದಾಗಿ ಜಿಲ್ಲಾ ಮಂತ್ರಿ ಹಾಗೂ ನನ್ನನ್ನು ಬಾಯ್ಕಾಟ್ ಮಾಡುತ್ತಾರೆ.ನಿಮಗೆಲ್ಲಾ ಪಾಠ ಮಾಡಬೇಕಾ? ಹಿಂಗೆ ಬಂದರೆ ಹೇಗೆ ಎಂದು ಸಿಇಓ ಅವರನ್ನು ಪ್ರಶ್ನಿಸಿದರು. ಬೇಸರ ಆಗುತ್ತದೆ. ಸಭೆಗಳೇ ಆಗಬಾರದು ಸರ್ಕಾರದ ಆದೇಶ ಅದಕ್ಕಾಗಿ ಮಾಡಬೇಕು. ಇಂತಹ ವಿಚಾರಕ್ಕೆ ನಮ್ಮಂತವರಿರಬಾರದು ಎಂದು ಕಿಡಿ ಕಾರಿದರು.

Leave a Reply

Your email address will not be published. Required fields are marked *