ಹೊಸ ವರ್ಷದ ದಿನವೆ ಕೋಟೆ ಬಳಿ ಸರಣಿ ಅಪಘಾತ ಸಂಭವಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ರಾಜ್ಯದ ಮೂಲೆ ಮೂಲೆಗಳಿಂದ ಕೋಟೆಯನ್ನು ವೀಕ್ಷಿಸಲು ಪ್ರವಾಸಿಗರು ಬರುತ್ತಾರೆ. ಇಂದು ಕೂಡ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದು, ಕೋಟೆ ಕಡೆಯಿಂದ ಉಚ್ಚಂಗಿಯಲ್ಲಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಟ್ರಾಕ್ಟರ್ ಹೋಗುತ್ತಿದ್ದು, ಬ್ರೇಕ್ ಫೇಲ್ ಆಗಿದ್ದ ಬಸ್ಸೊಂದು ಹಿಂದಿನಿಂದ ಬಂದು ಟ್ರಾಕ್ಟರ್ ಗೆ ಗುದ್ದಿ, ನಂತರ ಎರಡು ಬೈಕ್ ಗಳಿಗೆ ಗುದ್ದಿದೆ. ಬಸ್ ನ ಬ್ರೇಕ್ ಫೆಲ್ಯೂರ್ ಆಗಿದೆ ಎಂದು ಬಸ್ ಚಾಲಕ ಕೂಗಿಕೊಂಡು ಬರುತ್ತಿದ್ದನಾದರು ನಿಯಂತ್ರಣ ತಪ್ಪಿ ಸರಣಿ ಅಪಘಾತ ಸಂಭವಿಸಿದೆ. ಯಾವುದೇ ಪ್ರಾಣಾಪಾಯಗಾದಿದ್ದರೂ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇದರಿಂದ ಆಗಬಹುದಾದ ಬಾರೀ ಅನಾಹುತ ತಪ್ಪಿದಂತಾಗಿದೆ. ಸಂಚಾರಿ ಮತ್ತು ಕೋಟೆ ಠಾಣೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.