ಯುವ ಮುಖಂಡ ಪ್ರೇಮ್ ಸಾಗರ್ ಮನೆಗೆ ಸಮಾಜ ಕಲ್ಯಾಣ ಸಚಿವರ ಭೇಟಿ

ಜಿಲ್ಲಾ ಸುದ್ದಿ

ಚಿತ್ರದುರ್ಗದ ಯುವ ಮುಖಂಡ ಪ್ರೇಮ್ ಸಾಗರ್ ಮನೆಗೆ ಸಮಾಜ ಕಲ್ಯಾಣ ಸಚಿವ ಡಾ. ಹೆಚ್. ಸಿ ಮಹದೇವಪ್ಪ ಭೇಟಿ ನೀಡಿದರು. ಅವರು ಚಿತ್ರದುರ್ಗದ ತರಾಸು ರಂಗ ಮಂದಿರದಲ್ಲಿ ಆಯೋಜಿಸಿದ್ದ ಎಸ್ಸಿ ಎಸ್ಟಿ‌ ವಿದ್ಯಾರ್ಥಿಗಳ ಸಮಾವೇಶದಲ್ಲಿ ಭಾಗವಹಿಸಿ ಆ ನಂತರ ವೇಮನ ನಗರದ ಎರಡನೇ ಕ್ರಾಸ್ ನಲ್ಲಿರುವ ಪ್ರೇಮ್ ಸಾಗರ್ ಅವರ ಮನೆಗೆ ಭೇಟಿ ನೀಡಿ ಸುಮಾರು ಒಂದು ಗಂಟೆ ಕಾಲ ವಿಶ್ರಾಂತಿ ಪಡೆದು ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಬಗ್ಗೆ ಚರ್ಚಿಸಿದರು. ಈ ಸಮಯದಲ್ಲಿ ಮಾಜಿ‌ ಸಚಿವ ಹೆಚ್. ಆಂಜನೇಯ, ಶಾಸಕರಾದ ಬಸವಂತಪ್ಪ, ವಿರೇಂದ್ರ ಪಪ್ಪಿ, ಬಿಪಿ ಪ್ರೇಮ್ ನಾಥ್ ಮತ್ತು ಬಿಪಿ ತಿಪ್ಪೇಸ್ವಾಮಿ ಬಿಪಿ ಪ್ರೇಮ್ ಸಾಗರ್ ಇದ್ದರು.

 

 

Leave a Reply

Your email address will not be published. Required fields are marked *