ಚಿತ್ರದುರ್ಗದ ಎಸ್ಪಿ ಕೆ. ಪರುಶುರಾಮ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ. ಇವರ ಸ್ಥಳಕ್ಕೆ ನೂತನ ಎಸ್ಪಿಯಾಗಿ ಧರ್ಮೇಂದರ್ ಕುಮಾರ್ ಮೀನಾ ಅವರನ್ನು ನೇಮಿಸಿ ಆದೇಶಿಸಿದೆ. ಧರ್ಮೇಂದರ್ ಕುಮಾರ್ ಮೀನಾ ಅವರು ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು 2012 ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಪರುಶುರಾಮ್ ಅವರಿಗೆ ಸರ್ಕಾರ ಇನ್ನು ಜಾಗವನ್ನು ತೋರಿಸಿಲ್ಲ.