ಮೃತ ದೇಹ ಸಾಗಿಸುತ್ತಿದ್ದ. ಅಂಬ್ಯುಲೆನ್ಸ್ ಅಪಘಾತಕ್ಕೀಡಾಗಿ ಮೂವರು ಮೃತಪಟ್ಟ ಘಟನೆ ಮಲ್ಲಾಪುರದ ಬಳಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ಮಲ್ಲಾಪುರದ ರಾಷ್ಟ್ರೀಯ 48ರಲ್ಲಿ ಹೆದ್ದಾರಿಯಲ್ಲಿ ಅಹಮದಾಬಾದ್ ನಿಂದ ತಮಿಳುನಾಡಿನ ತಿರುನಾವೇಲಿಗೆ ಶವವನ್ನು ಸಾಗಿಸುವ ಅಂಬ್ಯುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇಬ್ಬರಿಗೆ ತೀವ್ರವಾಗಿ ಗಾಯಗಳಾಗಿವೆ. ಮೃತಪಟ್ಟವರನ್ನು ಕನಕಮಣಿ(72)
ಆಕಾಶ್(17) ಮತ್ತು ಆಂಬುಲೆನ್ಸ್ ಚಾಲಕ(45) ಹೆಸರು ತಿಳಿದು ಬಂದಿಲ್ಲ.
ಗಾಯಾಳುಗಳಾದ ಜನ ಶೇಖರ್(51) ಮತ್ತು ಮೌಳಿ ರಾಜನ್( 40 ) ಎಂದು ಗುರುತಿಸಲಾಗಿದೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.