ಪ್ರಧಾನಿ ನರೇಂದ್ರಮೋದಿರವರ ಪಾರದರ್ಶಕ ಆಡಳಿತ ಹಾಗೂ ಚಿತ್ರದುರ್ಗ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿರವರ ಅಭಿವೃದ್ದಿ ಕೆಲಸಗಳನ್ನು ಮೆಚ್ಚಿ ಇಲ್ಲಿನ ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ರಾಮಣ್ಣ, ಪ್ರಧಾನ ಕಾರ್ಯದರ್ಶಿ ದ್ಚಾರಕನಾಥ್ ಇವರುಗಳ ನೇತೃತ್ವದಲ್ಲಿ ಅನೇಕರು ಶನಿವಾರ ಬಿಜೆಪಿ.ಗೆ ಸೇರ್ಪಡೆಯಾದರು.
ಗುಂಡೇರಿ ಮಂಜುನಾಥ್, ರಾಘವೇಂದ್ರ, ಮಂಜುನಾಥ್(ಭಂಡಾರಿ) ಮಹದೇವಪ್ಪ, ನಂದೀಶ್, ರಾಘವೇಂದ್ರ, ಶ್ರೀವಿಲಾಸ್, ಮಹಂತೇಶ್ ಎಸ್. ರಾಮಗಿರಿ ಮಂಜುನಾಥ್, ಸಂತೋಷ್, ಬಸಣ್ಣ, ಮಾರುತಿ, ಶಿವಮೂರ್ತಿ, ಲೋಕೇಶ್ ಸಪ್ತಗಿರಿ, ಮೋಹನ್, ನಾಗರಾಜ್, ದೇವರಾಜ್, ಚಿತ್ರಲಿಂಗಪ್ಪ, ಮನೋಜ್, ವಿನೋದ್, ಸತೀಶ್, ಭಗವಾನ್, ಲೋಹಿತ್, ರಾಹುಲ್, ತಿಪ್ಪೇಸ್ವಾಮಿ, ರತ್ನಮ್ಮ, ಸೀನ, ರವಿಕುಮಾರ್ ಇವರುಗಳು ಚಿನ್ನ ಬೆಳ್ಳಿ ವರ್ತಕರ ಸಂಘದಲ್ಲಿದ್ದು ಬಿಜೆಪಿಗೆ ಸೇರ್ಪಡೆಯಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿರವರನ್ನು ಬೆಂಬಲಿಸುವುದಾಗಿ ಹೇಳಿದರು.