ಕಡ್ಡಾಯ ಮತದಾನ ಮಾಡಬೇಕು ಎನ್ನುವುದು ಚುನಾವಣೆ ಆಯೋಗದ ಉದ್ದೇಶವಾಗಿದೆ. ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಮತಗಟ್ಟೆ ಕೇಂದ್ರಗಳತ್ತ ಮತದಾರರನ್ನು ಕೈಬೀಸಿ ಕರೆಯುವಂತೆ ಗೋಡೆಗೆ ಸುಂದರವಾದ ಬಣ್ಣ ಬಣ್ಣದ ಚಿತ್ರ ಕಲೆಗಳನ್ನು ಬಳಿಸಲಾಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ದಿವಾಕರ್ ಮಾರ್ಗದರ್ಶನದಂತೆ 9 ಮತಗಟ್ಟಿ ಕೇಂದ್ರಗಳಿಗೆ ಗ್ರಾಪಂ ಅಧ್ಯಕ್ಷ ಕುಮಾರಸ್ವಾಮಿ. ಹಾಗೂ ಸರ್ವ ಸದಸ್ಯರ ಅನುಮತಿ ಮೇರೆಗೆ ಗ್ರಾಪಂ ಪಿಡಿಒ ರಾಮಚಂದ್ರಪ್ಪ ವಿಶೇಷವಾಗಿ ಅಪರೂಪದ ಶೈಲಿಯ ಚಿತ್ರಕಲೆ ಅಲಂಕಾರಗೊಳಿಸಲಾಗಿದೆ.
ಇನ್ನೇನು ವಿಧಾನ ಸಭೆ ಚುನಾವಣೆ ಕೆಲವೇ ದಿನಗಳು ಬಾಕಿ ಇದ್ದು ಮತಗಟ್ಟೆ ಕೇಂದ್ರಗಳಿಗೆ ಶೌಚಾಲಯ. ವಿದ್ಯುತ್ .ಪೀಠೋಪಕರಣ.ವಿಕಲಚೇತನರಿಗೆ.ವೃದ್ದರಿಗೆ ಮತಗಟ್ಟೆ ಕೇಂದ್ರಗಳ ಒಳಗೆ ಮತದಾನ ಮಾಡಲು ಸುಲಭಾಗಿ ಹೋಗಲು ಇಳಿಜಾರು ಮೆಟ್ಟಿಲು. ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಜತೆಗೆ ಮತಗಟ್ಟೆ ಕೇಂದ್ರವನ್ನು ಅತ್ಯಂತ ವಿಶೇಷ ಕೇಂದ್ರವನ್ನಾಗಿ ಬಣ್ಣ ಬಣ್ಣ ಚಿತ್ತಾರಗೊಳಿಸಿ, ಅತಿ ಹೆಚ್ಚು ಮತದಾರರು ಮತದಾನದಲ್ಲಿ ಪಾಲ್ಗೊಳುವಂತೆ ಮಾಡಲು ಸಂಪೂರ್ಣವಾಗಿಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಮತಗಟ್ಟೆ ಕೇಂದ್ರಗಳನ್ನು ಸಮುದಾಯಗಳಿಗೆ ಹತ್ತಿರ ತರುವ ಉದ್ದೇಶದಿಂದ ವಿನೂತನ ಪ್ರಯತ್ನಮಾಡಲಾಗಿದೆ .ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಚಲಾಯಿಸುವಂತೆ ಪಿಡಿಒ ರಾಮಚಂದ್ರಪ್ಪ ಮನವಿ ಮಾಡಿಕೊಂಡಿದ್ದಾರೆ.