ಮುಂದಿನ ‌ಸ್ಪರ್ಧಾ ಕ್ಷೇತ್ರದ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಶ್ರೀರಾಮುಲು

ರಾಜ್ಯ

ಬ್ರೇಕಿಂಗ್ ನ್ಯೂಸ್

ಬಳ್ಳಾರಿಯಿಂದ ಮೊಳಕಾಲ್ಮೂರಿಗೆ ಬಂದು‌ ಕಳೆದ‌ ಚುನಾವಣೆಯಲ್ಲಿ ಗೆದ್ದು ಬೀಗಿ ಆರೋಗ್ಯ ಸಚಿವನಾಗಿ ನಂತರ ಸಾರಿಗೆ ಮತ್ತು ಪರಿಶಿಷ್ಟರ ಕಲ್ಯಾಣ ಇಲಾಖೆ ಸಚಿವರಾಗಿರುವ ಶ್ರೀರಾಮುಲು ಚುನಾವಣೆಯ ತನ್ನ ಕಣ ಯಾವುದು ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

 

 

 

ಬಿಜೆಪಿ ನಾಯಕರ ಒತ್ತಡದ ಮೇರೆಗೆ ಎರಡು ಕಡೆಗೆ ಸ್ಪರ್ಧಿಸಿ ಸಿದ್ದರಾಮಯ್ಯ ವಿರುದ್ಧ ಸೋಲು ಕಂಡರೂ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದಲ್ಲಿ‌ ಬಾರೀ ಗೆಲುವನ್ನು ಸಾಧಿಸಿದ್ದ ಶ್ರೀರಾಮುಲು ಈ ಬಾರಿಯೂ ಕೂಡ ಮೊಳಕಾಲ್ಮೂರಿನಲ್ಲಿಯೇ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು, ಆದರೆ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿರುವ ಶ್ರೀರಾಮುಲು ಬಳ್ಳಾರಿಯಲ್ಲಿ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮೊಳಕಾಲ್ಮೂರಿನಲ್ಲಿ ನೂತನ ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀರಾಮುಲು ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಭಿಮಾನಿಗಳು ಇಲ್ಲಿಯೇ ಸ್ಪರ್ಧಿಸಬೇಕು ಎಂದು‌ ಹೇಳುತ್ತಿದ್ದಾರೆ ಒತ್ತಡವೂ ಇದೆ. ಆದರೆ ನನಗೆ ಓಡಾಡಲು ದೂರ ಆಗುತ್ತದೆ ಎನ್ನುವ ಕಾರಣಕ್ಕೆ ಬಳ್ಳಾರಿಯಲ್ಲಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ನಾನು‌ ಸಾಕಷ್ಟು ಅಭಿವೃದ್ದಿಯನ್ನು ಮಾಡಿದ್ದು, ಇಲ್ಲಿ ಗ್ರಾಮೀಣ ಭಾಗಗಳು ದೂರ ದೂರವಿದೆ. ಅವುಗಳಿಗೆ ನನ್ನಿಂದ ಹೋಗಲು ‌ಸಾಧ್ಯವಿಲ್ಲ, ಸ್ಥಳೀಯರಿಗೆ ನಾನು ಅವಕಾಶ ಮಾಡಿಕೊಡಬೇಕು. ಆದ್ದರಿಂದ ನಾನು‌ ಈ‌ ಬಾರಿ ಬಳ್ಳಾರಿಗೆ ಹೋಗುತ್ತಿದ್ದೇನೆ, ಆ ನಂತರ ಅಲ್ಲಿ‌ಯಾವ ಕ್ಷೇತ್ರ ಎಂದು‌ ಖಚಿತವಾಗಿ ಹೇಳುತ್ತೇನೆ ಎಂದರಾದರೂ ಒಂದು‌ ಮಾಹಿತಿಯ ಪ್ರಕಾರ ಅವರು ಸೊಂಡೂರಿನಲ್ಲಿ ಸ್ಪರ್ಧಿಸಲಿದ್ದಾರೆ ಎಂದು‌ ತಿಳಿದು ಬಂದಿದೆ

Leave a Reply

Your email address will not be published. Required fields are marked *