ಕೊಲೆ ಆರೋಪ: ತಂದೆ ತಾಯಿ ಜೈಲು ಪಾಲು,ಮಕ್ಕಳು ಬಾಲಮಂದಿರಕ್ಕೆ

ಕ್ರೈಂ

ವ್ಯಕ್ತಿಯೊಬ್ಬನ ಕೊಲೆ ಪ್ರಕರಣದಲ್ಲಿ ತಂದೆ ತಾಯಿ ಇಬ್ಬರೂ ಜೈಲು ಪಾಲಾಗಿ, ಮಕ್ಕಳು ಕಲ್ಯಾಣ ಸಮಿತಿಗೆ ದಾಖಲಾದ ಘಟನೆ ಚಿತ್ರದುರ್ಗದ ಹೊಳಲ್ಕೆರೆಯ ಶಿವಂಗಂಗಾದಲ್ಲಿ ನಡೆದಿದೆ.

 

 

ಶಿವಗಂಗಾ ಗ್ರಾಮದಲ್ಲಿ ವ್ಯಕ್ತಿಯ ಕೊಲೆ ನಡೆದಿತ್ತು. ಆ ಕೊಲೆ ಆರೋಪದಡಿಯಲ್ಲಿ ತಂದೆ ತಾಯಿಯನ್ನು ಬಂಧಿಸಲಾಗಿತ್ತು.ಕೊಲೆ ಮಾಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ತಂದೆ ತಾಯಿಯಿಬ್ಬರೂ ಕೂಡ ಜೈಲು ಪಾಲಾಗಿದ್ದಾರೆ. ಆದರೆ ಮಕ್ಕಳನ್ನು ಬಾಲ‌ಸಮಿತಿ ಮುಂದೆ ಹಾಜರು ಪಡಿಸಿದ ಮಕ್ಕಳ‌ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಭಾಕರ್ ಅವರು ಸಮಿತಿಯ ಆದೇಶದಂತೆ ಮಕ್ಕಳ ಲಾಲನೆ ಪೋಷಣೆಗಾಗಿ ಮಕ್ಕಳನ್ನು ಬಾಲ‌ ಮಂದಿರಕ್ಕೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ತಂದೆ ಚಿತ್ರದುರ್ಗದ ಕಾರಾಗೃದಲ್ಲಿದ್ದರೆ, ಮಹಿಳಾ ಕಾರಾಗೃಹ ಶಿವಮೊಗ್ಗದಲ್ಲಿ ತಾಯಿಯಿಯನ್ನು ಕಳುಹಿಸಿಕೊಡಲಾಗಿದೆ. ಈ ಇಬ್ಬರಿಗೂ ಮೂರು ಜನ ಮಕ್ಕಳಿದ್ದು, 8 7 ಮತ್ತು 3 ನೇ ತರಗತಿ ಓದುತ್ತಿದ್ದಾರೆ. ಇವರನ್ನು ನೋಡಿಕೊಳ್ಳುವವರು ಯಾರೂ ಇಲ್ಲದೆ ಇರುವುದರಿಂದ ಚಿತ್ರ ಹಳ್ಳಿ ಪೊಲೀಸ್ ಸಬ್ ಇನ್ಸಪೆಕ್ಟರ್ ಆಶಾ ಮಕ್ಕಳ‌ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದ್ದಾರೆ. ಹೊಳಲ್ಕೆರೆ ಸಿಡಿಪಿಓ ಮಲ್ಲೇಶ್,ಅವರು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಜನವರಿ 31 ರಂದು ಹಾಜರುಪಡಿಸಿದ್ದರು, ಮಕ್ಕಳ ಕಲ್ಯಾಣ ಸಮಿತಿಯು ಮಕ್ಕಳ ಪಾಲನೆ ಪೋಷಣೆಗೆ ಮಕ್ಕಳನ್ನು ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ದಾಖಲು ಮಾಡಿಕೊಳ್ಳಲಾಗಿದೆ ಎಂದು ಮಕ್ಕಳ‌ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಪ್ರಭಾಕರ್ ತಿಳಿಸಿದ್ದಾರೆ

Leave a Reply

Your email address will not be published. Required fields are marked *