ಶಬರಿಮಲೆ ಅಯ್ಯಪ್ಪನಿಗೆ ಬಂಗಾರದ ಆಭರಣ ಸಮರ್ಪಣೆ

ರಾಜ್ಯ

ಪತ್ನಿ, ಪುತ್ರನೊಂದಿಗೆ ನೀಲಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಜಿ.ರಘು ಆಚಾರ್

ಮಕರ ಸಂಕ್ರಾಂತಿ ಶುಭದಿನದಂದು ಶ್ರೀ ಶಬರಿಮಲೆ ಅಯ್ಯಪ್ಪನಿಗೆ ಬಂಗಾರದ ಆಭರಣ ಸಮರ್ಪಣೆ

 

 

ಚಿತ್ರದುರ್ಗದಲ್ಲಿ ಜಿ.ರಘು ಆಚಾರ್ ಇಂದಿನಿಂದ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಪತ್ನಿ ಆಶಾ ಹಾಗು ಪುತ್ರ ಹರ್ಷವರ್ಧನ್ ಜೊತೆಯಾಗಿ ಮೊದಲಿಗೆ ನೀಲಕಂಠೇಶ್ವರ ದೇವಸ್ಥಾನಕ್ಕೆ ಆಗಮಿಸಿದ ರಘು ಆಚಾರ್, ನೀಲಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು. ನಂತರ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ತೆರಳಿ ಸುಮಾರು 55 ಗ್ರಾಂ ತೂಕದ ಬಂಗಾರದ ಆಭರಣ ಸಮರ್ಪಿಸಿ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಚಿತ್ರದುರ್ಗದಲ್ಲಿ ಮೊದಲಿಗೆ ನೀಲಕಂಠೇಶ್ವರನಿಗೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸುವುದು ವಾಡಿಕೆಯಾಗಿದೆ. ಅಂತೆಯೇ ನಾನೂ ಕೂಡ ಇಂದು ಪತ್ನಿ ಹಾಗು ಪುತ್ರನ ಜೊತೆ ನೀಲಕಂಠೇಶ್ವರನಿಗೆ ಪೂಜೆ ಸಲ್ಲಿಸಿದ್ದೇನೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೀಸಲು ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 16 ಜನ ಆಕಾಂಕ್ಷಿಗಳಿದ್ದಾರೆ. ಎಲ್ಲರೂ ಒಟ್ಟಾಗಿ ಪಕ್ಷದ ಪರ ಪ್ರಚಾರ ಮಾಡುತ್ತೇವೆ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲಾ ಒಟ್ಟಾಗಿ ಸೇರಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ ಸುಮಾರು 45 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Leave a Reply

Your email address will not be published. Required fields are marked *