ನಾಗರೀಕ ಸೇವಾ ಕೇಂದ್ರಗಳಲ್ಲಿ‌ ಸಮಾಜ‌ ಘಾತುಕ ಘಟನೆಗಳು ನಡೆಯಬಾರದು

ಜಿಲ್ಲಾ ಸುದ್ದಿ

ಸರ್ಕಾರಿ ಸ್ವಾಮ್ಯದ ಗ್ರಾಹಕರ ಸೇವ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ಸೌಲಭ್ಯಗಳು ಪಾರದರ್ಶಕವಾಗಿ ಯಾವುದೇ ದೂರುಗಳು ಬಾರದಂತೆ ಮತ್ತು ಯಾವುದೇ ಅವ್ಯವಹಾರಗಳಿಗೆ ಎಡೆ ಮಾಡದಂತೆ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು. ಅವರು  ಚಳ್ಳಕೆರೆ ಮುಖ್ಯರಸ್ತೆಯ ಕುಮಾರ್ ನಾಗರೀಕ ಸೇವಾ ಕೇಂದ್ರದ ಉದ್ಘಾಟನೆ ಮಾಡಿ ಮಾತನಾಡಿದರು, ಸರ್ಕಾರದಿಂದ ಕೂಡುತ್ತಿರುವ ಈ ಸೌಲಭ್ಯಗಳು ಸಾರ್ವಜನಿಕರಿಗೆ ಸಹಾಯವಾಗಬೇಕು ಮತ್ತು ಸಮಾಜದಲ್ಲಿ ವಿಶ್ವಾಸ ಗಳಿಸಬೇಕು ಶೋಷಿತರು ದುರ್ಬಲರು ಮತ್ತು ಅಸಹಾಯಕರು ಪರಿತಪಿಸುವಂತಾಗಬಾರದು, ನೀವು ನೀಡುತ್ತಿರುವ ಈ ಸೌಲಭ್ಯಗಳು ಇಂತಹ ವರ್ಗದವರಿಗೆ ಊರುಗೋಲಾಗಬೇಕು ನಿಮ್ಮ ಜೀವನ ನಿರ್ವಹಣೆಯೂ ಸೇರಿದಂತೆ ಸಮಾಜದಲ್ಲಿರುವ ಜನರಿಗೆ  ಭಾಗಶಃ ಮೀಸಲಿರಿಸಬೇಕು ಇಂತಹ ಸೇವಾ ಕೇಂದ್ರಗಳಲ್ಲಿ ಮೊನ್ನೆ ನಡೆದಂತೆ ವೋಟರ್ ಐಡಿ ಕಾರ್ಡ್ ನಕಲು ಪ್ರಕರಣ ನಮ್ಮ ಮುಂದಿದೆ ಇಂತಹ ಯಾವುದೇ ಕೃತ್ಯಗಳು ಇಂತಹ ಕೇಂದ್ರಗಳಿಂದ ನಡೆಯಬಾರದು ಜೀವನ ನಿರ್ವಹಣೆ ಶ್ರಮದಿಂದ ಮತ್ತು ಕರ್ತವ್ಯ ಪ್ರಜ್ಞೆಯಿಂದ ಆಗಬೇಕು ಯಾವುದೇ ಅನ್ಯ ಮಾರ್ಗದಿಂದ ನಡೆಯಕೂಡದು ಈ ದೇಶದ ಕಾನೂನು ಮತ್ತು ನಿಯಮಾವಳಿಗಳನ್ನು ನಾವು ಪರಿಪಾಲಿಸಬೇಕು ಸಂವಿಧಾನದ ಆಶಯ ಕೂಡ ಇದೇ ಆಗಿದೆ. ಹಾಗಾಗಿ ಇವತ್ತು ಆರಂಭವಾಗುತ್ತಿರುವ ಈ ಕೇಂದ್ರ ತಾಲೂಕಿನಲ್ಲಿ ಮಾದರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅಂಗಡಿ ಮಾಲೀಕರಾದ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *