ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಸಂಸ್ಥೆಯಲ್ಲಿ ವಿಶ್ವ ಸಾಂಸ್ಕೃತಿಕ ಜಾಂಬೂರಿ ನಡೆಯಲಿದ್ದು ಚಿತ್ರದುರ್ಗ ತಾಲೂಕಿನಿಂದ ಜಾಂಬೂರಿಗೆ ತೆರಳುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಜಾಗೃತಿ ಜಾಥವನ್ನು ಚಿತ್ರದುರ್ಗ ಸ್ಥಳೀಯ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ನೇತ್ರತ್ವದಲ್ಲಿ ಹಮ್ಮಿಕೋಳ್ಳಲಾಗಿತ್ತು.. ಜಾಥವನ್ನು ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಬಡಾವಣೆ ಪೋಲಿಸ್ ಠಾಣೆಯ ನಯೀಮ್ ಆಹ್ಮದ್ ರವರು ಉದ್ಘಾಟಿಸಿ ಶುಭ ಕೋರಿದರು, *ಏಕ್ ಭಾರತ್ – ಶ್ರೇಷ್ಠ ಭಾರತ್* ಘೋಷಣೆಯಡಿ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥ ಚಲಿಸಿತು… ಜಾಥದಲ್ಲಿ ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ಡಾ.ರಹಮತ್ ಉಲ್ಲಾ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ದೇವರಜ್ ಪ್ರಸಾದ್, ಖಜಾಂಚಿ ಎ.ಗಂಗಾಧರ, ಉಪಾಧ್ಯಕ್ಷರಾದ ಪ್ರಸನ್ನಕುಮಾರ್, ಶ್ರೀ ಮತಿ ಪರ್ವಿನ್, ಕಾಲೇಜಿ ಪ್ರಾಂಶುಪಾಲರಾದ ನಾಗರಾಜ್, ಹಾಗೂ ಸ್ಕೌಟ್ಸ್ ಶಿಕ್ಷಕರಾದ ಯಲ್ಲಪ್ಪ, ತಾಸ್ಮೀಯಾ, ಬಷೀರಾ, ನೂರ್ ಪಾತಿಮ, ಹಾಗೂ ಸ್ಕೌಟ್ಸ್ ವಿದ್ಯಾರ್ಥಿಗಳು, ರೇಂಜರ್ಸ್ ಮತ್ತು ರೋವರ್ಸ್ ಜಾಥದಲ್ಲಿ ಭಾಗವಹಿಸಿದ್ದರು..