ಮೆಕ್ಕೆ ಜೋಳ ಬೆಳೆಗೆ ಗುಲಾಬಿ ಕಾಂಡ ಕೊರಕ ಹುಳುವಿನ ಬಾಧೆ

ಜಿಲ್ಲಾ ಸುದ್ದಿ

ನೀರಾವರಿ ಮೆಕ್ಕೆಜೋಳ ಬೆಳೆಗೆ ಗುಲಾಬಿ ಕಾಂಡ ಕೊರೆಯುವ ಹುಳುವಿನ ಬಾದೆ:  ಹತೋಟಿಗೆ ಕೃಷಿ ಇಲಾಖೆ ಸಲಹೆ

 

 

ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಹೋಬಳಿ ಕುರುಬರಹಳ್ಳಿ ಗ್ರಾಮಕ್ಕೆ ಡಿಸೆಂಬರ್ 8ರಂದು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ-ಕೃಷಿ ಸಂಜೀವಿನಿ ವಾಹನವು ಭೇಟಿ ನೀಡಿ ನೀರಾವರಿ ಮೆಕ್ಕೆಜೋಳ ಬೆಳೆ ಪರೀಕ್ಷಿಸಿದ ಸಂದರ್ಭದಲ್ಲಿ ಗುಲಾಬಿ ಕಾಂಡ ಕೊರೆಯುವ ಹುಳುವಿನ ಬಾದೆ ಕಂಡುಬಂದಿರುತ್ತದೆ.
ಜಿಲ್ಲೆಯಲ್ಲಿ ಪ್ರಸ್ತುತ ನೀರಾವರಿ ಮೆಕ್ಕೆಜೋಳ ಬೆಳೆಯು 25-45 ದಿನಗಳ ಬೆಳವಣಿಗೆ ಹಂತದಲ್ಲಿರುತ್ತದೆ. ಗುಲಾಬಿ ಕಾಂಡ ಕೊರೆಯುವ ಹುಳುವಿನ ಬಾದೆ ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಕುರುಬರಹಳ್ಳಿ ಗ್ರಾಮ ಸೇರಿದಂತೆ ಸುತ್ತ-ಮುತ್ತ ಪ್ರದೇಶದಲ್ಲಿ ಹಾಗೂ ನೀರಾವರಿ ಮೆಕ್ಕೆಜೋಳ ಬೆಳದಂತಹ ಉಳಿದ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಹ ಈ ಸಂದರ್ಭದಲ್ಲಿ ಕಂಡುಬರುವ ಸಾಧ್ಯತೆ ಇರುತ್ತದೆ. ಈ ಹುಳುವಿನ ಹತೋಟಿಗೆ ಕ್ಲೋರಂಟ್ರಾನೀಲಿಪ್ರೋಲ್ 0.2 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಈ ಹುಳುವಿನ ಬಾಧೆಯನ್ನು ಹತೋಟಿಗೆ ತರಬಹುದು ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರು, ವಿಷಯ ತಜ್ಞರಾದ ಮಂಜುನಾಥಸ್ವಾಮಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *