ನಾಯಕನಹಟ್ಟಿ ಯಿಂದ ಚಳ್ಳಕೆರೆಗೆ ಹಿಂತಿರುಗುವೇಳೆ ನೇರಲಗುಂಟೆ ಸಮೀಪ ರಸ್ತೆ ಬೈಕ್ ಮತ್ತು ಆಟೋ ನಡುವೆ ನಡೆದ ಅಪಘಾತದಲ್ಲಿತೀವ್ರವಾಗಿಗಾಯಗೊಂಡು ರಸ್ತೆ ಮಧ್ಯದಲ್ಲಿಬಿದ್ದಿದ್ದ ಗಾಯಾಳುಗಳನ್ನು ರಕ್ಷಿಸಿ ತಹಶೀಲ್ದಾರ್ ಎನ್ ರಘುಮೂರ್ತಿ ಮಾನವೀಯತೆ ಮೆರೆದಿದ್ದಾರೆ. ಕೂಡಲೇ ಗಾಯಳುಗಳನ್ನು ತಮ್ಮ ಸರ್ಕಾರಿ ವಾಹನದಲ್ಲಿ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ
ಆಸ್ಪತ್ರೆಯ ಸಿಬ್ಬಂದಿಗಳಿಗೆ ಸೂಚ ನೆ ನೀಡಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ.
ಮಾನವೀಯತೆ ಮೆರೆದ ಚಳ್ಳಕೆರೆ ತಾಲೂಕಿನ ಹಾಗೂ ದಂಡಾಧಿಕಾರಿ ಎನ್. ರಘುಮೂರ್ತಿ ನವರಿಗೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಈ ಸಂದರ್ಭದಲ್ಲಿ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಸದಸ್ಯರಾದ ತಿಪ್ಪೇಸ್ವಾಮಿ. ಹಾಗೂ ರಾಜಸ್ವ ನಿರೀಕ್ಷಕ ಚೇತನ್ ಕುಮಾರ್. ಕನ್ನಯ್ಯ. ಮತ್ತು ಗ್ರಾಮಸ್ಥರು ಹಾಜರಿದ್ದರು